ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೋಡಿ ನಟ ಸುದೀಪ್ ಶಾಲೆಗೆ ನೆರವು ನೀಡುವುದಾಗಿ ಘೋಷಿಸಿದ್ದರು. ವಸ್ತು ಸ್ಥಿತಿ ಪರಿಶೀಲನೆಗೆ ರಮೇಶ, ಚಾರಿಟಬಲ್ ಸೊಸೈಟಿ ನಿರ್ದೇಶಕರಾದ ನಾಗೇಂದ್ರ ಮತ್ತು ಪುಟ್ಟರಾಜು ಬುಧವಾರ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.