ತಹಶೀಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರು ನಿಯಮಿತವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಪರಿಶೀಲಿಸಬೇಕು. ಕೃಷಿ ಪರಿಕರ ಖರೀದಿಸಿದರೆ ಬೀಜ ಅಥವಾ ಗೊಬ್ಬರ ನೀಡುವುದಗಿ ಮಾರಾಟ ಕೇಂದ್ರದವರು ಷರತ್ತು ಹಾಕಿದರೆ ರೈತರು ನೇರವಾಗಿ ಕೃಷಿ ಇಲಾಖೆ ಹಾಗೂ ಜಾಗೃತದಳ ಅಥವಾ ತಹಶಿಲ್ದಾರ್ ಕಚೇರಿ ಸಹಾಯವಾಣಿಗೆ ಫೋನ್ ಮಾಡಿ ಮಾಹಿತಿ ನೀಡಬಹುದು.