ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಕಲೆಯ ಮೌಲ್ಯ ಹೆಚ್ಚಿಸಲಿ ಕಲಾ ಗ್ಯಾಲರಿ

ಕಲಾಕೃತಿಗಳ ಪ್ರದರ್ಶನಕ್ಕೆ ಸುಸಜ್ಜಿತ ಕಟ್ಟಡದ ನಿರೀಕ್ಷೆಯಲ್ಲಿ ಅವಳಿ ನಗರದ ಚಿತ್ರಕಲಾವಿದರು
Published : 29 ಸೆಪ್ಟೆಂಬರ್ 2025, 8:36 IST
Last Updated : 29 ಸೆಪ್ಟೆಂಬರ್ 2025, 8:36 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪ್ರದರ್ಶನದ ಕ್ಷಣ... –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪ್ರದರ್ಶನದ ಕ್ಷಣ... –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿ
ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಕಲಾ ಗ್ಯಾಲರಿ
ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ
ಕೆ.ವಿ. ಶಂಕರ
ಕೆ.ವಿ. ಶಂಕರ
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ
ಸರ್ಕಾರದಿಂದ ಶಾಸಕರ ನಿಧಿ ಬಿಡುಗಡೆ ಆಗುವುದು ತಡವಾಗಿದೆ. ಅದು ಬಂದ ತಕ್ಷಣ ಮಿಣಜಗಿ ಗ್ಯಾಲರಿಗೆ ಆದ್ಯತೆ ಮೇಲೆ ನೆರವು ನೀಡಲಾಗುವುದು
ಮಹೇಶ ಟೆಂಗಿನಕಾಯಿ ಶಾಸಕ
ಮಿಣಜಗಿ ಗ್ಯಾಲರಿಯು ಪಾಲಿಕೆಯ ಕಟ್ಟಡದಲ್ಲೇ ಇರುವ ಕಾರಣ ಕಟ್ಟಡ ಅಭಿವೃದ್ಧಿ ಯೋಜನೆಯಲ್ಲಿ ಪರಿಗಣಿಸಿ ಅಗತ್ಯ ದುರಸ್ತಿ ಕಾರ್ಯ ಮಾಡಿಸಲಾಗುವುದು
ವಿಜಯಕುಮಾರ ಆರ್. ಹೆಚ್ಚುವರಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಹೋರಾಟ ಮಾಡಿ ಗ್ಯಾಲರಿ ಪಡೆದುಕೊಂಡಿದ್ದೇವೆ. ಅದನ್ನು ಚಾಲ್ತಿಯಲ್ಲಿ ಇಡಬೇಕು. ಅದಕ್ಕಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದೇವೆ
ಕೆ.ವಿ. ಶಂಕರ ಮಿಣಜಗಿ ಕಲಾಮಂದಿರ ಸಮಿತಿ ಸದಸ್ಯ
ರಾಜ್ಯ ಸರ್ಕಾರದವರು ಸ್ಥಳಾವಕಾಶ ನೀಡಿದರೆ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಆಗುತ್ತದೆ. ಇಲ್ಲದಿದ್ದರೆ ಅದು ಜಿಲ್ಲೆಯ ಕೈತಪ್ಪುತ್ತದೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಲಲಿತಕಲಾ ಅಕಾಡೆಮಿಗೆ ಬಿಡದ ಗ್ರಹಣ
ಧಾರವಾಡಕ್ಕೆ ಮಂಜೂರಾದ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರದ ಕಟ್ಟಡಕ್ಕೆ 2023ರಲ್ಲಿ ಭೂಮಿಪೂಜೆ ಆಗಿದ್ದು ಬಿಟ್ಟರೆ ಭೂ ವ್ಯಾಜ್ಯದಿಂದಾಗಿ ಅದು ಮೇಲೇಳಲಿಲ್ಲ. ಈ ಕೇಂದ್ರ ಕಾರ್ಯಾರಂಭ ಮಾಡಿದರೆ ಎಲ್ಲ ಕಲಾ ಪ್ರಕಾರಕ್ಕೂ ಅವಕಾಶವಾಗುವುದಲ್ಲದೇ ದೇಶ ವಿದೇಶಗಳಿಂದಲೂ ಕಲಾವಿದರು ಬಂದು ಕೆಲಸ ಮಾಡುತ್ತಾರೆ. ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ‘ಸರ್ಕಾರದ ನಿಯಮಾವಳಿಯಲ್ಲಿ ಕಲೆ ಸಂಸ್ಕೃತಿ ಉಳಿವಿಗಾಗಿ ಭವನ ಗ್ಯಾಲರಿ ನಿರ್ಮಾಣ ಮಾಡುವ ಅಂಶಗಳಿವೆ. ಆದರೆ ಅವುಗಳನ್ನು ನಿರಂತರವಾಗಿ ನಿರ್ವಹಣೆ ಮಾಡುವ ಅಂಶಗಳೇ ಇಲ್ಲ. ಈ ತಾಂತ್ರಿಕ ತೊಡಕು ನಿವಾರಣೆ ಆಗಬೇಕಿದೆ’ ಎಂದರು ಅಕಾಡೆಮಿಯ ಪ್ರಾದೇಶಿಕ ಗೌರವ ಸಂಯೋಜಕ ಶ್ರೀನಿವಾಸ ಶಾಸ್ತ್ರಿ.
ಹೀಗೂ ಮಾಡಬಹುದು...
ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಕನ್ನಡ ಭವನದಲ್ಲಿ ಗಾಯನ ನೃ‌ತ್ಯ ಪ್ರದರ್ಶನಕ್ಕೆ ಅವಕಾಶ ಇದೆ. ಅಲ್ಲೇ ಒಂದು ಮಹಡಿಯಲ್ಲಿ ಕಲಾ ಗ್ಯಾಲರಿ ಮಾಡಬಹುದು. ಕಾಟನ್ ಮಾರ್ಕೆಟ್‌ನಲ್ಲಿ ದೊಡ್ಡದಾದ ಸಾಂಸ್ಕೃತಿಕ ಭವನ ನಿರ್ಮಿಸಲಾಗಿದೆ. ಅಷ್ಟು ದೊಡ್ಡ ಕಟ್ಟಡದ ಬಾಡಿಗೆ ಭರಿಸಿ ಪ್ರದರ್ಶನ ಏರ್ಪಡಿಸುವ ಶಕ್ತಿ ಚಿತ್ರಕಲಾವಿದರಿಗಿಲ್ಲ. ಅದೇ ಕಟ್ಟಡದ ಒಂದು ಸಣ್ಣ ಭಾಗದಲ್ಲಿ ಗ್ಯಾಲರಿ ನಿರ್ಮಿಸಿದರೆ ಅನುಕೂಲ. ಚಿತ್ರಕಲೆಯನ್ನು ಪ್ರತ್ಯೇಕವಾಗಿಸುವ ಬದಲು ಹೀಗೆ ಸಂಗೀತ ನೃತ್ಯ ನಾಟಕ ಚಿತ್ರಕಲೆ ಎಲ್ಲದಕ್ಕೂ ಒಂದೇ ಕಡೆ ವ್ಯವಸ್ಥೆ ಮಾಡಿದರೆ ಯಾವುದೋ ಒಂದು ಕಾರ್ಯಕ್ರಮಕ್ಕೆ ಬಂದ ಕಲಾಸಕ್ತರು ಗ್ಯಾಲರಿಯತ್ತಲೂ ಹೆಜ್ಜೆ ಹಾಕಬಹುದು. ಕಲೆ– ಸಂಸ್ಕೃತಿಗೆ ಮೀಸಲಾದ ಸರ್ಕಾರದ ಬೇರೆ ಭವನಗಳಲ್ಲೂ ಈ ಮಾದರಿ ಅಳವಡಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT