<p>ಧಾರವಾಡ: ವರ್ಣಮಯ ಚಿತ್ರಗಳು, ಸಂಸ್ಕೃತಿ ಬಿಂಬಿಸುವ ಕಲಾಕೃತಿ, ಕರಕುಶಲ ವಸ್ತುಗಳು, ಕಲಾತ್ಮಕ ವಿನ್ಯಾಸದ ವಸ್ತ್ರಗಳು... ಹೀಗೆ ಗ್ರಾಮ ಭಾರತದ ಸೊಗಡು ಬಿಂಬಿಸುವ ಕಲಾಲೋಕವನ್ನು ‘ಯುವ ಕೃತಿ’ ಕಟ್ಟಿ ಕೊಟ್ಟರೂ, ಅವುಗಳನ್ನು ತಯಾರಿಸಿದ ನಿಜ ಕಲಾವಿದರ ಅನುಪಸ್ಥಿತಿ ತಣ್ಣನೆ ಕಾಡಿತು.</p>.<p>ವೈವಿಧ್ಯಮಯ ಕಲಾಕೃತಿಗಳು ತಮ್ಮ ಕಥನವನ್ನು ಪ್ರತಿನಿಧಿಗಳಿಂದ ಹೇಳಿಸಿಕೊಳ್ಳುತ್ತಿದ್ದವು. ಸೃಷ್ಟಿಸಿದವರ ಕಲಾ<br />ಸೃಷ್ಟಿಯ ಪ್ರದರ್ಶನವಷ್ಟೇ ಇಲ್ಲಿ ತಲುಪಿದೆ. ಕಲಾಕೃತಿಯ ರಚನೆಯ ಹಿಂದಿನ ಶ್ರಮ, ಬೇಕಾದ ಪರಿಕರ, ತಗುಲುವ ವೆಚ್ಚ, ಸಮಯ, ರಚನೆಯ ಅನುಭವಗಳ ಕುರಿತು ತಿಳಿದುಕೊಳ್ಳಲು ಬಯಸಿದವರಿಗೆ ಕುತೂಹಲವೇ ಉತ್ತರವಾಯಿತು.</p>.<p>ನೆಹರೂ ಯುವ ಕೇಂದ್ರವು ಕಲಾವಿದರ ಬದಲಿಗೆ ಪ್ರತಿನಿಧಿಗಳನ್ನಾಗಿ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಕೇಂದ್ರದ ಸದಸ್ಯರನ್ನು ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಕೆಲವು ಮಳಿಗೆಗಳನ್ನು ನೋಡಿಕೊಳ್ಳಲು ಕಳುಹಿಸಿದ್ದಾರೆ. ಹೆಚ್ಚಿನ ಮಾಹಿತಿ ಕೇಳಿದರೆ, ಪ್ರತಿನಿಧಿಗಳಿಂದ ‘ನಾವು ಪ್ರತಿನಿಧಿಗಳಷ್ಟೇ, ಹೆಚ್ಚಿನ ಮಾಹಿತಿ ಇಲ್ಲ’ ಎನ್ನುವ ಉತ್ತರ ಸಿಗುತ್ತಿತ್ತು.</p>.<p class="Subhead">ಭಾಷಾ ತೊಡಕು: ಚಂಡೀಗಢ, ಛತ್ತಿಸ್ಗಢ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರ ಮುಂತಾದ ಕಡೆಗಳಿಂದ ಬಂದಿರುವ ಪ್ರತಿನಿಧಿಗಳಿಗೆ ಜನರ ಜೊತೆ ಸಂವಹನ ನಡೆಸಲು ಭಾಷೆ ಅಡ್ಡಿಯಾಗುತ್ತಿತ್ತು. ಹಿಂದಿ, ಇಂಗ್ಲಿಷ್ ಅರ್ಥವಾಗದೆ ಅವರು ಹೇಳಿದ್ದಕ್ಕೆ ತಲೆಯಲ್ಲಾಡಿಸುತ್ತ ಮುಂದೆ ಸಾಗುತ್ತಿದ್ದ ದೃಶ್ಯವೂ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ವರ್ಣಮಯ ಚಿತ್ರಗಳು, ಸಂಸ್ಕೃತಿ ಬಿಂಬಿಸುವ ಕಲಾಕೃತಿ, ಕರಕುಶಲ ವಸ್ತುಗಳು, ಕಲಾತ್ಮಕ ವಿನ್ಯಾಸದ ವಸ್ತ್ರಗಳು... ಹೀಗೆ ಗ್ರಾಮ ಭಾರತದ ಸೊಗಡು ಬಿಂಬಿಸುವ ಕಲಾಲೋಕವನ್ನು ‘ಯುವ ಕೃತಿ’ ಕಟ್ಟಿ ಕೊಟ್ಟರೂ, ಅವುಗಳನ್ನು ತಯಾರಿಸಿದ ನಿಜ ಕಲಾವಿದರ ಅನುಪಸ್ಥಿತಿ ತಣ್ಣನೆ ಕಾಡಿತು.</p>.<p>ವೈವಿಧ್ಯಮಯ ಕಲಾಕೃತಿಗಳು ತಮ್ಮ ಕಥನವನ್ನು ಪ್ರತಿನಿಧಿಗಳಿಂದ ಹೇಳಿಸಿಕೊಳ್ಳುತ್ತಿದ್ದವು. ಸೃಷ್ಟಿಸಿದವರ ಕಲಾ<br />ಸೃಷ್ಟಿಯ ಪ್ರದರ್ಶನವಷ್ಟೇ ಇಲ್ಲಿ ತಲುಪಿದೆ. ಕಲಾಕೃತಿಯ ರಚನೆಯ ಹಿಂದಿನ ಶ್ರಮ, ಬೇಕಾದ ಪರಿಕರ, ತಗುಲುವ ವೆಚ್ಚ, ಸಮಯ, ರಚನೆಯ ಅನುಭವಗಳ ಕುರಿತು ತಿಳಿದುಕೊಳ್ಳಲು ಬಯಸಿದವರಿಗೆ ಕುತೂಹಲವೇ ಉತ್ತರವಾಯಿತು.</p>.<p>ನೆಹರೂ ಯುವ ಕೇಂದ್ರವು ಕಲಾವಿದರ ಬದಲಿಗೆ ಪ್ರತಿನಿಧಿಗಳನ್ನಾಗಿ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಕೇಂದ್ರದ ಸದಸ್ಯರನ್ನು ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಕೆಲವು ಮಳಿಗೆಗಳನ್ನು ನೋಡಿಕೊಳ್ಳಲು ಕಳುಹಿಸಿದ್ದಾರೆ. ಹೆಚ್ಚಿನ ಮಾಹಿತಿ ಕೇಳಿದರೆ, ಪ್ರತಿನಿಧಿಗಳಿಂದ ‘ನಾವು ಪ್ರತಿನಿಧಿಗಳಷ್ಟೇ, ಹೆಚ್ಚಿನ ಮಾಹಿತಿ ಇಲ್ಲ’ ಎನ್ನುವ ಉತ್ತರ ಸಿಗುತ್ತಿತ್ತು.</p>.<p class="Subhead">ಭಾಷಾ ತೊಡಕು: ಚಂಡೀಗಢ, ಛತ್ತಿಸ್ಗಢ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರ ಮುಂತಾದ ಕಡೆಗಳಿಂದ ಬಂದಿರುವ ಪ್ರತಿನಿಧಿಗಳಿಗೆ ಜನರ ಜೊತೆ ಸಂವಹನ ನಡೆಸಲು ಭಾಷೆ ಅಡ್ಡಿಯಾಗುತ್ತಿತ್ತು. ಹಿಂದಿ, ಇಂಗ್ಲಿಷ್ ಅರ್ಥವಾಗದೆ ಅವರು ಹೇಳಿದ್ದಕ್ಕೆ ತಲೆಯಲ್ಲಾಡಿಸುತ್ತ ಮುಂದೆ ಸಾಗುತ್ತಿದ್ದ ದೃಶ್ಯವೂ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>