‘ಬಾಯಾರಿದವರಿಗೆ ನೀರು ನೀಡುವುದು ಕರ್ತವ್ಯ, ಸಂಸ್ಕೃತಿಯೂ ಹೌದು. 2016ರಿಂದ ಆಟೊರಿಕ್ಷಾದಲ್ಲಿ ನೀರಿನ ಕ್ಯಾನ್ ಅಳವಡಿಸಿಕೊಂಡು ಜನರಿಗೆ ಉಚಿತವಾಗಿ ನೀರು ಹಂಚುತ್ತಿರುವೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ನನ್ನಿಂದ ಪ್ರೇರಿತರಾಗಿ ಇನ್ನೂ 14 ಆಟೊರಿಕ್ಷಾ ಚಾಲಕರು ಉಚಿತ ನೀರಿನ ಸೇವೆ ಆರಂಭಿಸಿದ್ದು ಖುಷಿ ಕೊಟ್ಟಿದೆ. ಅವರೆಲ್ಲರಿಗೆ ಕ್ಯಾನ್ ಅಳವಡಿಸುವ ಸ್ಟ್ಯಾಂಡ್ ನಿರ್ಮಿಸಿ ಕೊಟ್ಟಿದ್ದೇನೆ’ ಎಂದು ನಾಗರಾಜ ಗಬ್ಬೂರ ‘ಪ್ರಜಾವಾಣಿ’ಗೆ ತಿಳಿಸಿದರು.