ಮುಂಬೈ, ಮೌಂಟ್ಅಬು, ದೆಹಲಿ, ಅಹಮದಾಬಾದ್, ಮೈಸೂರು, ಬೆಂಗಳೂರು, ಕಲಬುರ್ಗಿ, ಸೊಲ್ಲಾಪುರ, ಲಕ್ನೊ ಸೇರಿದಂತೆ ದೇಶದ ವಿವಿಧ ಭಾಗಗಳ ಈಶ್ವರಿ ವಿಶ್ವವಿದ್ಯಾಲಯದಿಂದ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೌಂಟಅಬುವಿನ ರಾಜಯೋಗಿನಿ ಸಂತೋಷ ದೀದೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ, ರಾಜಯೋಗಿ ಬೃಜ್ ಮೋಹನ್ ಭಾಯಿಜಿ, ಕರುಣಾ ಬಾಯಿಜಿ, ನಿರ್ಮಲಾ ಬೆಹನ್ ಇದ್ದರು.