ಚಲನಚಿತ್ರ ನಟ ಚೇತನ ಅಹಿಂಸಾ ಅವರು 7ರಂದು ಅಧಿವೇಶನ ಉದ್ಘಾಟಿಸುವರು. ಬಾಮ್ಸೆಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಕಮಲಾಕಾಂತ ಅಶೋಕ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಐಎಎಸ್ ಅಧಿಕಾರಿ ಕವಿತಾ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. 8ರಂದು ನಡೆಯುವ ಅಧಿವೇಶನದಲ್ಲಿ ಹೈದರಾಬಾದ್ ಹೈಕೋರ್ಟ್ ವಕೀಲ ಶ್ರೀಕಾಂತಾ ಚಿಂತಾಲಾ, ಮಹಾರಾಷ್ಟ್ರದ ರಾಜೇಂದ್ರ ಗಾಯಕವಾಡ, ಬಾಮ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಬಾಬುರಾವ್ ಚಿಮಕೋಡ, ಕೋಲ್ಕತ್ತಾದ ವಿಜ್ಞಾನಿ ಸಂಜಯ ಗಜಬೈ, ಬೆಳಗಾವಿಯ ಪತ್ರಕರ್ತ ಜಕ್ಬಾಲ್ ಜಕಾತಿ, ಡಿಆರ್ಡಿಓ ಉಪವಿಜ್ಞಾನಿ ರಾಜೇಂದ್ರ ಯಾದವ್, ಕಲಬುರಗಿಯ ಮಾರುತಿ ಗಂಜಗಿರಿ ಅವರು ’ದೇಶದ ಏಕತೆ ಮತ್ತು ವ್ಯವಸ್ಥೆಯ ಪರಿವರ್ತನೆಯಲ್ಲಿ ಆಳುವ ವರ್ಗದಿಂದ ಆಪಾಯವಿದೆಯೇ’ ಎನ್ನುವ ಕುರಿತು ವಿಷಯ ಮಂಡಿಸುವರು. ಸಂಜೆ 7ರವರೆಗೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.