<p><strong>ಧಾರವಾಡ</strong>: ‘ಬನ್ನಂಜೆ ಗೋವಿಂದಾಚಾರ್ಯ ಅವರ ಅನುವಾದದ ಶೈಲಿ ಮನಸ್ಸಿಗೆ ತಟ್ಟುತ್ತದೆ. ಸಂಸ್ಕೃತಿಯನ್ನು ಜನರಿಗೆ ತಿಳಿಸುವ ಆಶಯದಿಂದ ಭಗವದ್ಗೀತೆ ಮೊದಲಾದ ಶಾಸ್ತ್ರ ಗ್ರಂಥಗಳನ್ನು ಸರಳವಾಗಿ ಅನುವಾದಿಸಿದ್ದಾರೆ’ ಎಂದು ವಿದ್ವಾಂಸ ವಿಜಯಸಿಂಹ ಆಚಾರ್ಯ ಹೇಳಿದರು.</p>.<p>ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮತ್ತು ನಗರದ ಸ್ನೇಹ ಪ್ರತಿಷ್ಠಾನದ ವತಿಯಿಂದ ಆಲೂರು ವೆಂಕಟರಾವ ಭವನದಲ್ಲಿ ಶನಿವಾರ ನಡೆದ ‘ಬನ್ನಂಜೆ 90ರ ವಿಶ್ವನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಗೋವಿಂದಾಚಾರ್ಯ ಅವರ ಸಾಹಿತ್ಯವು ಕನ್ನಡಮ್ಮನ ಒಡವೆ. ಅವರ ಕೃತಿಗಳನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.</p>.<p>ಸಾಹಿತಿ ಹರ್ಷ ಡಂಬಳ ಮಾತನಾಡಿ, ‘ಗೋವಿಂದಾಚಾರ್ಯ ಅವರು 155 ಕೃತಿಗಳನ್ನು ಬರೆದಿದ್ದಾರೆ. ಅವರು ವೇದಾಂತದ ಬಹು ಆಯಾಮದಲ್ಲಿ ಮಾನ್ಯತೆ ಪಡೆದಿದ್ದರು. ಧಾರವಾಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದರು.</p>.<p>ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್.ಪಾಟೀಲ ಮಾತನಾಡಿ, ‘ಗೋವಿಂದಾಚಾರ್ಯ ಅವರು ಎಲ್ಲರೊಂದಿಗೆ ಬೆರೆಯತ್ತಿದ್ದರು. ಗುಣ ಸಂಪನ್ನರಾಗಿದ್ದರು’ ಎಂದು ಬಣ್ಣಿಸಿದರು.</p>.<p>ಸಾಹಿತಿ ಎಚ್.ವಿ.ಕಾಖಂಡಿಕಿ ಮಾತನಾಡಿ, ‘ಗೋವಿಂದಾಚಾರ್ಯ ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲ ಕೃತಿಗಳನ್ನು ಓದಬೇಕು. ಅರ್ಥ ಮಾಡಿಕೊಳ್ಳಬೇಕು’ ಎಂದರು.</p>.<p>ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ಶ್ರೀರಾಮ ಭಟ್, ವಿಜ್ಞಾನಿ ರಮೇಶ ವಾಸುದೇವ ಆಚಾರ್ಯ, ರಾಧಿಕಾ ಖಾಕಂಡಿಕಿ ಮಾತನಾಡಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಟ್ರಸ್ಟಿ ವೀಣಾ ಬನ್ನಂಜೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಬನ್ನಂಜೆ ಗೋವಿಂದಾಚಾರ್ಯ ಅವರ ಅನುವಾದದ ಶೈಲಿ ಮನಸ್ಸಿಗೆ ತಟ್ಟುತ್ತದೆ. ಸಂಸ್ಕೃತಿಯನ್ನು ಜನರಿಗೆ ತಿಳಿಸುವ ಆಶಯದಿಂದ ಭಗವದ್ಗೀತೆ ಮೊದಲಾದ ಶಾಸ್ತ್ರ ಗ್ರಂಥಗಳನ್ನು ಸರಳವಾಗಿ ಅನುವಾದಿಸಿದ್ದಾರೆ’ ಎಂದು ವಿದ್ವಾಂಸ ವಿಜಯಸಿಂಹ ಆಚಾರ್ಯ ಹೇಳಿದರು.</p>.<p>ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮತ್ತು ನಗರದ ಸ್ನೇಹ ಪ್ರತಿಷ್ಠಾನದ ವತಿಯಿಂದ ಆಲೂರು ವೆಂಕಟರಾವ ಭವನದಲ್ಲಿ ಶನಿವಾರ ನಡೆದ ‘ಬನ್ನಂಜೆ 90ರ ವಿಶ್ವನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಗೋವಿಂದಾಚಾರ್ಯ ಅವರ ಸಾಹಿತ್ಯವು ಕನ್ನಡಮ್ಮನ ಒಡವೆ. ಅವರ ಕೃತಿಗಳನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.</p>.<p>ಸಾಹಿತಿ ಹರ್ಷ ಡಂಬಳ ಮಾತನಾಡಿ, ‘ಗೋವಿಂದಾಚಾರ್ಯ ಅವರು 155 ಕೃತಿಗಳನ್ನು ಬರೆದಿದ್ದಾರೆ. ಅವರು ವೇದಾಂತದ ಬಹು ಆಯಾಮದಲ್ಲಿ ಮಾನ್ಯತೆ ಪಡೆದಿದ್ದರು. ಧಾರವಾಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದರು.</p>.<p>ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್.ಪಾಟೀಲ ಮಾತನಾಡಿ, ‘ಗೋವಿಂದಾಚಾರ್ಯ ಅವರು ಎಲ್ಲರೊಂದಿಗೆ ಬೆರೆಯತ್ತಿದ್ದರು. ಗುಣ ಸಂಪನ್ನರಾಗಿದ್ದರು’ ಎಂದು ಬಣ್ಣಿಸಿದರು.</p>.<p>ಸಾಹಿತಿ ಎಚ್.ವಿ.ಕಾಖಂಡಿಕಿ ಮಾತನಾಡಿ, ‘ಗೋವಿಂದಾಚಾರ್ಯ ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲ ಕೃತಿಗಳನ್ನು ಓದಬೇಕು. ಅರ್ಥ ಮಾಡಿಕೊಳ್ಳಬೇಕು’ ಎಂದರು.</p>.<p>ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾಂಸ ಶ್ರೀರಾಮ ಭಟ್, ವಿಜ್ಞಾನಿ ರಮೇಶ ವಾಸುದೇವ ಆಚಾರ್ಯ, ರಾಧಿಕಾ ಖಾಕಂಡಿಕಿ ಮಾತನಾಡಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಟ್ರಸ್ಟಿ ವೀಣಾ ಬನ್ನಂಜೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>