ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಹಾನಗಲ್ ಮೊದಲಿನಿಂದಲೂ ಪೈಪೋಟಿಯ ಕ್ಷೇತ್ರ. ಒಮ್ಮೆ ಬಿಜೆಪಿ ಗೆದ್ದರೆ ಮತ್ತೊಮ್ಮೆ ಬೇರೆಯವರು ಗೆಲ್ಲುತ್ತಿದ್ದರು. ಗೆಲುವಿನ ಅಂತರ ಸಹ ತೀರ ಕಡಿಮೆ ಇರುತ್ತಿತ್ತು. ಒಂದು ತಂಡವಾಗಿ ಚುನಾವಣೆ ಎದುರಿಸಿದ್ದೇವೆ. ಆದರೆ, ಜನರು ಮಾನೆ ಅವರ ಜನಪರ ಕಾರ್ಯಕ್ಕೆ ಬೆಂಬಲಿಸಿದ್ದಾರೆ’ ಎಂದರು.