ಬೆಳಗಾವಿ ಜಿಲ್ಲೆ ರಾಮದುರ್ಗದ ಕಟಕೋಳ ಗ್ರಾಮದ 34 ವರ್ಷದ ರುದ್ರಪ್ಪ, ಜಿಲ್ಲೆಯಲ್ಲಿ ಸೋಂಕಿನ ಪ್ರಭಾವ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಊರಿಗೆ ಕಳುಹಿಸಿದ್ದಾರೆ. ಕೊರೊನಾ ವಾರಿಯರ್ ಪೋಷಾಕು ತೊಟ್ಟು ಸೋಂಕಿನ ವಿರುದ್ಧ ಹೋರಾಡುವ ಅಸ್ತ್ರಗಳನ್ನೂ ಕರಗತ ಮಾಡಿಕೊಳ್ಳತೊಡಗಿದ್ದರು. ಹಿರಿಯ ಸಹೋದ್ಯೋಗಿಗಳ ಬೆಂಬಲವೂ ಇತ್ತು.