ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದ ಬಗೆಹರಿದ ವಿಷಯ. ಅದನ್ನು ಮುಂದಿಟ್ಟುಕೊಂಡು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ,ನೆಮ್ಮದಿ ಕದಡುವುದು ಸಮಂಜಸವಲ್ಲ. ಈ ಬಾರಿ ಅಲ್ಲಿಯವರೇ ನಮ್ಮವರನ್ನು ಪ್ರಚೋದಿಸಿದ್ದಾರೆ. ಅವರು ಬಸ್ಸಿಗೆ ಮಸಿ ಬಳಿದರೆಂದು ನಾವು ಬಳಿಯುವುದು, ನಾವು ಮಸಿ ಬಳಿದೆವೆಂದರೆ ಅವರು ಬಳಿಯುವುದು. ಇವೆಲ್ಲ ಅರ್ಥಹೀನ ಸಂಗತಿಗಳು' ಎಂದು ಬೇಸರ ವ್ಯಕ್ತಪಡಿಸಿದರು.