‘ಮ್ಯಾಂಗನೀಸ್, ಕಲ್ಲಿದ್ದಲು ಗಣಿಗಾರಿಕೆ ಕುರಿತ ರಾಜ್ಯಗಳ ಅಧಿಕಾರವನ್ನು ಕೇಂದ್ರ ಕಸಿದುಕೊಳ್ಳುವ ಯತ್ನ ಮಾಡಿಲ್ಲ. ಈ ಹಿಂದಿದ್ದ ಮಾರ್ಗಸೂಚಿಗಳನ್ನೇ ಜಾರಿಗೊಳಿಸಲಾಗಿದೆ. ಅದರ ಪರಿಣಾಮ ₹45 ಸಾವಿರ ಕೋಟಿ ಸಂಗ್ರಹವಾಗಿದ್ದು, ₹25 ಸಾವಿರ ಕೋಟಿ ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗಿದೆ. ಗಣಿಗಾರಿಕೆಯಿಂದ ಬಂದ ಆದಾಯವನ್ನು ಪುನರ್ವಸತಿ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.