<p><strong>ಹುಬ್ಬಳ್ಳಿ:</strong> ಭಗವದ್ಗೀತೆಯ ಶ್ಲೋಕಗಳಿಗೆ ಕನ್ನಡ ಲಿಪಿಯಲ್ಲಿ, ಕ್ಷಾತ್ರ (ಸಾವಜಿ) ಭಾಷೆಯಲ್ಲಿ ವಿವರಣೆ ಒಳಗೊಂಡ ‘ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ’ ಗ್ರಂಥವನ್ನು ನಗರದ ಕಮರಿಪೇಟೆಯ ಕಮರೇಮ್ಮ ಹಾಲ್ನಲ್ಲಿ ಬುಧವಾರ ನಡೆ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಎಸ್ಎಸ್ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಶಿಕುಮಾರ ಮೆಹರವಾಡೆ, ‘ಸುಮಾರು 4,000 ವರ್ಷಗಳ ಹಿಂದೆ ರಚಿಸಿದ ಭಗವದ್ಗೀತೆಯ ಪ್ರತಿಯೊಂದು ಶಬ್ದವು ಇಂದಿಗೂ ಪ್ರಸ್ತುತವಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಅದರಲ್ಲಿ ಪರಹಾರವಿದೆ. ಎಲ್ಲ ಸಮಾಜಗಳಿಗೂ ಮಾರ್ಗದರ್ಶಕವಾದ ಭಗವದ್ಗೀತೆಯ ಶ್ಲೋಕಗಳಿಗೆ ಕ್ಷಾತ್ರ ಭಾಷೆಯಲ್ಲಿ ವಿವರಣೆ ಒಳಗೊಂಡ ಈ ಗ್ರಂಥವನ್ನು ಬಿಡುಗಡೆ ಮಾಡಿರುವುದು ಐತಿಹಾಸಿಕ ಕ್ಷಣ’ ಎಂದರು.</p>.<p>‘ದೇವರನ್ನು ಯಾವುದೇ ವಿಧಾನದಲ್ಲಿ ಪೂಜಿಸಿದರೂ ಮೋಕ್ಷ ಪ್ರಾಪ್ತಿಯಾಗುವುದೆಂದು ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅದನ್ನು ಕೃಷ್ಣನಿಗೆ ಸಮರ್ಪಿಸಬೇಕು. ಭಗವದ್ಗೀತೆಯನ್ನು ಪೂಜಿಸುವುದರಿಂದ ಸಕಾರಾತ್ಮಕ ಭಾವನೆ ಹರಡುತ್ತದೆ. ಹಾಗಾಗಿ, ಗೀತೆಯ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ಈ ಗ್ರಂಥವನ್ನು ಎಲ್ಲೆಡೆ ಪಸರಿಸಲು ಶ್ರಮಿಸುವೆ’ ಎಂದು ಹೇಳಿದರು. </p>.<p>‘ಆಧುನಿಕ ಕಾಲದಲ್ಲಿ ಮನುಷ್ಯನನ್ನು ಸದ್ವಿಚಾರಗಳತ್ತ ಸೆಳೆಯುವುದು ತುಂಬಾ ಅವಶ್ಯವಿದೆ. ಇದಕ್ಕಾಗಿ ಸತ್ಸಂಗಗಳ ಮೂಲಕ ಆಧ್ಯಾತ್ಮಿಕ ವಿಚಾರಗಳನ್ನು ಪ್ರಚುರಪಡಿಸಬೇಕು. ಸಮಾಜದವರು ವ್ಯಾಪಾರ ವೃತ್ತಿಯೊಂದಿಗೆ ಧಾರ್ಮಿಕ ಕಾರ್ಯಗಳತ್ತಲೂ ಗಮನ ಹರಿಸಿ, ಇತರರಿಗೂ ಅದರ ಅನುಭೂತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಗ್ರಂಥದ ಕರ್ತೃ ಯಲ್ಲಪ್ಪ ಯಮನಾಸಾ ಲದವಾ ಮಾತನಾಡಿ, ‘ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿತು. ಭಗವದ್ಗೀತೆ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಎಸ್ಎಸ್ಕೆ ಸಮಾಜದವರಿಗೆ ನೆರವಾಗಲೆಂದು ಸಾಕಷ್ಟು ಅಧ್ಯಯನ ನಡೆಸಿ, ಕ್ಷಾತ್ರ ಭಾಷೆಯಲ್ಲಿ ಭಗವದ್ಗೀತೆಗೆ ವಿವರಣೆ ನೀಡಿರುವೆ’ ಎಂದರು.</p>.<p>ಇನ್ನೋರ್ವ ಕರ್ತೃ ನಂದಾ ಯಲ್ಲಪ್ಪ ಲದವಾ ಮಾತನಾಡಿದರು. ಕಕಮರಿ ರಾಮತೀರ್ಥದ ತಾರಾಚಂದ್ರ ಮಹಾರಾಜ, ಡಿ.ಸಿ. ಬಾಕಳೆ, ಕೃಪಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಎಸ್ಎಸ್ಕೆ ಕೋ–ಆಪ್ ಬ್ಯಾಂಕಿನ ಚೇರ್ಮನ್ ವಿಠ್ಠಲ ಲದವಾ, ಪಿ.ಎಂ. ಮೆಹರವಾಡೆ, ನಾರಾಯಣ ಖೋಡೆ, ಮೀರಾ ಮೆಹರವಾಡೆ, ಹನುಮಂತ ಸಾ ನಿರಂಜನ, ಅಮಿತ್ ಕತ್ತಿ, ಭರತ್ ಓಶಿ ಗುಜರಾತಿ, ಲಕ್ಷ್ಮಣ ದಲಭಂಜನ ಇದ್ದರು. </p>.<div><blockquote>ಸಮಾಜದವರು ಧರ್ಮ ಚಿಂತನೆ ಮಾಡಬೇಕು. ಪ್ರತಿ ದಿನ ಭಗವದ್ಗೀತೆ ಪಠಿಸಬೇಕು. ಹುಬ್ಬಳ್ಳಿಯಲ್ಲಿ ಸಹಸ್ರಾರ್ಜುನ ಮಂದಿರ ನಿರ್ಮಿಸಿ ಪುಣ್ಯಕ್ಷೇತ್ರವಾಗಿ ಮಾಡಲಾಗುತ್ತಿದೆ</blockquote><span class="attribution">ಸತೀಶ ಮೆಹರವಾಡೆ ಅಧ್ಯಕ್ಷ ಎಸ್ಎಸ್ಕೆ ಸಮಾಜದ ಹು–ಧಾ ಘಟಕ </span></div>.<p><strong>ಕೃತಿ ಪರಿಚಯ</strong> </p><p>ಕೃತಿ: ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ </p><p>ಕರ್ತೃ: ಯಲ್ಲಪ್ಪ ಯಮನಸಾ ಲದವಾ ನಂದಾ ಯಲ್ಲಪ್ಪ ಲದವಾ </p><p>ಪ್ರಕಾಶನ: ಸಾತ್ವಿಕ್ ಪಬ್ಲಿಕೇಷನ್ಸ್ </p><p>ಪುಟ: 160 </p><p>ದರ: ₹350</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಭಗವದ್ಗೀತೆಯ ಶ್ಲೋಕಗಳಿಗೆ ಕನ್ನಡ ಲಿಪಿಯಲ್ಲಿ, ಕ್ಷಾತ್ರ (ಸಾವಜಿ) ಭಾಷೆಯಲ್ಲಿ ವಿವರಣೆ ಒಳಗೊಂಡ ‘ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ’ ಗ್ರಂಥವನ್ನು ನಗರದ ಕಮರಿಪೇಟೆಯ ಕಮರೇಮ್ಮ ಹಾಲ್ನಲ್ಲಿ ಬುಧವಾರ ನಡೆ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಎಸ್ಎಸ್ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಶಿಕುಮಾರ ಮೆಹರವಾಡೆ, ‘ಸುಮಾರು 4,000 ವರ್ಷಗಳ ಹಿಂದೆ ರಚಿಸಿದ ಭಗವದ್ಗೀತೆಯ ಪ್ರತಿಯೊಂದು ಶಬ್ದವು ಇಂದಿಗೂ ಪ್ರಸ್ತುತವಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಅದರಲ್ಲಿ ಪರಹಾರವಿದೆ. ಎಲ್ಲ ಸಮಾಜಗಳಿಗೂ ಮಾರ್ಗದರ್ಶಕವಾದ ಭಗವದ್ಗೀತೆಯ ಶ್ಲೋಕಗಳಿಗೆ ಕ್ಷಾತ್ರ ಭಾಷೆಯಲ್ಲಿ ವಿವರಣೆ ಒಳಗೊಂಡ ಈ ಗ್ರಂಥವನ್ನು ಬಿಡುಗಡೆ ಮಾಡಿರುವುದು ಐತಿಹಾಸಿಕ ಕ್ಷಣ’ ಎಂದರು.</p>.<p>‘ದೇವರನ್ನು ಯಾವುದೇ ವಿಧಾನದಲ್ಲಿ ಪೂಜಿಸಿದರೂ ಮೋಕ್ಷ ಪ್ರಾಪ್ತಿಯಾಗುವುದೆಂದು ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅದನ್ನು ಕೃಷ್ಣನಿಗೆ ಸಮರ್ಪಿಸಬೇಕು. ಭಗವದ್ಗೀತೆಯನ್ನು ಪೂಜಿಸುವುದರಿಂದ ಸಕಾರಾತ್ಮಕ ಭಾವನೆ ಹರಡುತ್ತದೆ. ಹಾಗಾಗಿ, ಗೀತೆಯ ಸಂದೇಶವನ್ನು ಎಲ್ಲರೂ ಪಾಲಿಸಬೇಕು. ಈ ಗ್ರಂಥವನ್ನು ಎಲ್ಲೆಡೆ ಪಸರಿಸಲು ಶ್ರಮಿಸುವೆ’ ಎಂದು ಹೇಳಿದರು. </p>.<p>‘ಆಧುನಿಕ ಕಾಲದಲ್ಲಿ ಮನುಷ್ಯನನ್ನು ಸದ್ವಿಚಾರಗಳತ್ತ ಸೆಳೆಯುವುದು ತುಂಬಾ ಅವಶ್ಯವಿದೆ. ಇದಕ್ಕಾಗಿ ಸತ್ಸಂಗಗಳ ಮೂಲಕ ಆಧ್ಯಾತ್ಮಿಕ ವಿಚಾರಗಳನ್ನು ಪ್ರಚುರಪಡಿಸಬೇಕು. ಸಮಾಜದವರು ವ್ಯಾಪಾರ ವೃತ್ತಿಯೊಂದಿಗೆ ಧಾರ್ಮಿಕ ಕಾರ್ಯಗಳತ್ತಲೂ ಗಮನ ಹರಿಸಿ, ಇತರರಿಗೂ ಅದರ ಅನುಭೂತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.</p>.<p>ಗ್ರಂಥದ ಕರ್ತೃ ಯಲ್ಲಪ್ಪ ಯಮನಾಸಾ ಲದವಾ ಮಾತನಾಡಿ, ‘ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿತು. ಭಗವದ್ಗೀತೆ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಎಸ್ಎಸ್ಕೆ ಸಮಾಜದವರಿಗೆ ನೆರವಾಗಲೆಂದು ಸಾಕಷ್ಟು ಅಧ್ಯಯನ ನಡೆಸಿ, ಕ್ಷಾತ್ರ ಭಾಷೆಯಲ್ಲಿ ಭಗವದ್ಗೀತೆಗೆ ವಿವರಣೆ ನೀಡಿರುವೆ’ ಎಂದರು.</p>.<p>ಇನ್ನೋರ್ವ ಕರ್ತೃ ನಂದಾ ಯಲ್ಲಪ್ಪ ಲದವಾ ಮಾತನಾಡಿದರು. ಕಕಮರಿ ರಾಮತೀರ್ಥದ ತಾರಾಚಂದ್ರ ಮಹಾರಾಜ, ಡಿ.ಸಿ. ಬಾಕಳೆ, ಕೃಪಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಎಸ್ಎಸ್ಕೆ ಕೋ–ಆಪ್ ಬ್ಯಾಂಕಿನ ಚೇರ್ಮನ್ ವಿಠ್ಠಲ ಲದವಾ, ಪಿ.ಎಂ. ಮೆಹರವಾಡೆ, ನಾರಾಯಣ ಖೋಡೆ, ಮೀರಾ ಮೆಹರವಾಡೆ, ಹನುಮಂತ ಸಾ ನಿರಂಜನ, ಅಮಿತ್ ಕತ್ತಿ, ಭರತ್ ಓಶಿ ಗುಜರಾತಿ, ಲಕ್ಷ್ಮಣ ದಲಭಂಜನ ಇದ್ದರು. </p>.<div><blockquote>ಸಮಾಜದವರು ಧರ್ಮ ಚಿಂತನೆ ಮಾಡಬೇಕು. ಪ್ರತಿ ದಿನ ಭಗವದ್ಗೀತೆ ಪಠಿಸಬೇಕು. ಹುಬ್ಬಳ್ಳಿಯಲ್ಲಿ ಸಹಸ್ರಾರ್ಜುನ ಮಂದಿರ ನಿರ್ಮಿಸಿ ಪುಣ್ಯಕ್ಷೇತ್ರವಾಗಿ ಮಾಡಲಾಗುತ್ತಿದೆ</blockquote><span class="attribution">ಸತೀಶ ಮೆಹರವಾಡೆ ಅಧ್ಯಕ್ಷ ಎಸ್ಎಸ್ಕೆ ಸಮಾಜದ ಹು–ಧಾ ಘಟಕ </span></div>.<p><strong>ಕೃತಿ ಪರಿಚಯ</strong> </p><p>ಕೃತಿ: ಶ್ರೀ ಮದ್ಭಗವದ್ಗೀತಾ–ಕ್ಷಾತ್ರಾ ಭಾಷಾಮ </p><p>ಕರ್ತೃ: ಯಲ್ಲಪ್ಪ ಯಮನಸಾ ಲದವಾ ನಂದಾ ಯಲ್ಲಪ್ಪ ಲದವಾ </p><p>ಪ್ರಕಾಶನ: ಸಾತ್ವಿಕ್ ಪಬ್ಲಿಕೇಷನ್ಸ್ </p><p>ಪುಟ: 160 </p><p>ದರ: ₹350</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>