<p><strong>ಗುಡಗೇರಿ:</strong> ಗ್ರಾಮದಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವದಲ್ಲಿ ಬುಧವಾರ ರಾಜ್ಯ ವೈಭವವನ್ನು ತ್ಯಜಿಸಿ, ವೈರಾಗ್ಯ ಮನೋಭಾವದಿಂದ ದೀಕ್ಷೆ ಪಡೆಯುವ ಸನ್ನಿವೇಶದ ವಿಧಿ ವಿಧಾನಗಳು ಜರುಗಿದವು. ದೀಕ್ಷಾಕ್ಷರಗಳನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು.</p>.<p>108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ‘ಜೈನ ಧರ್ಮದಲ್ಲಿ ವೈರಾಗ್ಯ ದೀಕ್ಷೆ ಪಡೆದು ಆತ್ಮಕಲ್ಯಾಣ ಮಾಡಿಕೊಳ್ಳುತ್ತ ಬಂದಿದ್ದು, 24 ತೀರ್ಥಂಕರರು ಬೋಧಿಸಿದ ತತ್ವಗಳನ್ನು ಆಚರಣೆ ಮಾಡುವ ಮೂಲಕ ಶ್ರಾವಕರು ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಸಿಂಹನಗದ್ದೆ ಶ್ರೀ ಲಕ್ಷ್ಮಿಸೇನ ಭಟ್ಟಾರಕರು, ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕರು, ವರೂರ ಧರ್ಮಸೇನಾ ಭಟ್ಟಾರಕರ ನೇತೃತ್ವದಲ್ಲಿ ರಾಜ್ಯಾಭಿಷೇಕ ಹಾಗೂ ದೀಕ್ಷಾ ಕಲ್ಯಾಣಿಕ ವಿಧಾನಗಳು ನೆರವೇರಿದವು.</p>.<p>ಕೊಲ್ಹಾಪುರದ ಲಕ್ಷ್ಮಿಸೇನ ಭಟ್ಟಾರಕರ 33ನೇ ಜನ್ಮದಿನಾಚರಣೆ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಗೇರಿ:</strong> ಗ್ರಾಮದಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವದಲ್ಲಿ ಬುಧವಾರ ರಾಜ್ಯ ವೈಭವವನ್ನು ತ್ಯಜಿಸಿ, ವೈರಾಗ್ಯ ಮನೋಭಾವದಿಂದ ದೀಕ್ಷೆ ಪಡೆಯುವ ಸನ್ನಿವೇಶದ ವಿಧಿ ವಿಧಾನಗಳು ಜರುಗಿದವು. ದೀಕ್ಷಾಕ್ಷರಗಳನ್ನು ನಟನೆಯ ಮೂಲಕ ಪ್ರದರ್ಶಿಸಲಾಯಿತು.</p>.<p>108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ‘ಜೈನ ಧರ್ಮದಲ್ಲಿ ವೈರಾಗ್ಯ ದೀಕ್ಷೆ ಪಡೆದು ಆತ್ಮಕಲ್ಯಾಣ ಮಾಡಿಕೊಳ್ಳುತ್ತ ಬಂದಿದ್ದು, 24 ತೀರ್ಥಂಕರರು ಬೋಧಿಸಿದ ತತ್ವಗಳನ್ನು ಆಚರಣೆ ಮಾಡುವ ಮೂಲಕ ಶ್ರಾವಕರು ಆತ್ಮಕಲ್ಯಾಣ ಮಾಡಿಕೊಳ್ಳಬೇಕು’ ಎಂದು ಹೇಳಿದರು.</p>.<p>ಸಿಂಹನಗದ್ದೆ ಶ್ರೀ ಲಕ್ಷ್ಮಿಸೇನ ಭಟ್ಟಾರಕರು, ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕರು, ವರೂರ ಧರ್ಮಸೇನಾ ಭಟ್ಟಾರಕರ ನೇತೃತ್ವದಲ್ಲಿ ರಾಜ್ಯಾಭಿಷೇಕ ಹಾಗೂ ದೀಕ್ಷಾ ಕಲ್ಯಾಣಿಕ ವಿಧಾನಗಳು ನೆರವೇರಿದವು.</p>.<p>ಕೊಲ್ಹಾಪುರದ ಲಕ್ಷ್ಮಿಸೇನ ಭಟ್ಟಾರಕರ 33ನೇ ಜನ್ಮದಿನಾಚರಣೆ ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>