ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪ್ರಚಾರ ನಡೆಸಿದರು.
ಬೆಳಿಗ್ಗೆ ವಾಯು ವಿಹಾರಕ್ಕೆ ಬಂದಿದ್ದ ಜನರನ್ನು ಭೇಟಿಯಾಗಿ ಮತಯಾಚಿಸಿದರು.
'ಬಿಜೆಪಿಗೆ ಜೈ, ಮಹೇಶ ಟೆಂಗಿನಕಾಯಿಗೆ ಜೈ...', 'ಜೈ ಜೈ ಬಿಜೆಪಿ' ಎಂದು ಬೆಂಬಲಿಗರು ಘೋಷಣೆಗಳನ್ನು ಕೂಗಿದರು.
ಇದೇ ಸಂದರ್ಭದಲ್ಲಿ ಕೆಲವು ಜನರು ತಮ್ಮ ಪ್ರದೇಶಗಳಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ತಾವು ಆಯ್ಕೆಯಾಗಿ ಬಂದರೆ, ಸಮಸ್ಯೆ ಬಗೆಹರಿಸುವುದಾಗಿ ಟೆಂಗಿನಕಾಯಿ ಭರವಸೆ ನೀಡಿದರು.
ಪ್ರಚಾರ ಮುಗಿಸಿ ತೆರಳುವ ಸಂದರ್ಭದಲ್ಲಿ ವ್ಯಾಪಾರಿಯೊಬ್ಬರು ಹಣ್ಣಿನ ರಸ ನೀಡಿದರು. ಅದನ್ನು ಸವಿದು, ತೆರಳಿದರು.