<p><strong>ಹುಬ್ಬಳ್ಳಿ: </strong>ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ 33ನೇ ವಾರ್ಷಿಕ ಸಮ್ಮೇಳನ ಡಿ.13 ಮತ್ತು 14ರಂದು ಕೇಶ್ವಾಪುರದ ಶ್ರೀನಿವಾಸ ಗಾರ್ಡನ್ನಲ್ಲಿ ನಡೆಯಲಿದೆ.</p>.<p>ರೇರಾ ಹೊಸ ಕಾಯ್ದೆ, ಜಿಎಸ್ಟಿ, ಆದಾಯ ತೆರಿಗೆ, ಕಂಪನಿ ಕಾಯ್ದೆ, ಡಿಜಿಟಲ್ ತಂತ್ರಜ್ಞಾನ ವಿಷಯಗಳ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಕೆ.ವಿ.ದೇಶಪಾಂಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.</p>.<p>ಡಿ.13ರಂದು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಮ್ಮೇಳನವನ್ನು ಚೆನ್ಹೈನ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಪರಿಷತ್ತಿನ ಅಧ್ಯಕ್ಷ ಜೋಮನ್ ಜಾರ್ಜ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.</p>.<p>ಹೈದರಾಬಾದ್ನ ಲೆಕ್ಕಪರಿಶೋಧಕರಾದ ಅರುಣ ಶರ್ಮಾ, ದಯಾ ನಿವಾಸ ಶರ್ಮಾ, ಬೆಂಗಳೂರಿನ ವಿನಯ ತ್ಯಾಗರಾಜ, ಕೆ.ಪಿ.ನಾರಾಯಣನ್, ಮೊಹಮ್ಮದ್ ರಮೀಜ್, ಪೈಜಲ್, ಸಚಿನ ಕುಮಾರ್ ಬಿ.ಪಿ., ಮುಂಬೈನ ತನ್ಮಯ ಮೋದಿ, ಮಂದಾರ ವೈದ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ ಎಂದರು.</p>.<p>ದಾಸ ಸಾಹಿತ್ಯ ಉಪನ್ಯಾಸಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ಸುಮಾ ರಾಜಕುಮಾರ್ ಅವರು ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.</p>.<p>ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳಾದ ಹಿತೇಶ್ಕುಮಾರ್ ಮೋದಿ, ಎಚ್.ಎನ್.ಆಡಿನವರ, ಸುಭಾಶ್ ಪಾಟೀಲ, ಜಿ.ಎಂ.ಕಟ್ವಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ 33ನೇ ವಾರ್ಷಿಕ ಸಮ್ಮೇಳನ ಡಿ.13 ಮತ್ತು 14ರಂದು ಕೇಶ್ವಾಪುರದ ಶ್ರೀನಿವಾಸ ಗಾರ್ಡನ್ನಲ್ಲಿ ನಡೆಯಲಿದೆ.</p>.<p>ರೇರಾ ಹೊಸ ಕಾಯ್ದೆ, ಜಿಎಸ್ಟಿ, ಆದಾಯ ತೆರಿಗೆ, ಕಂಪನಿ ಕಾಯ್ದೆ, ಡಿಜಿಟಲ್ ತಂತ್ರಜ್ಞಾನ ವಿಷಯಗಳ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಕೆ.ವಿ.ದೇಶಪಾಂಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.</p>.<p>ಡಿ.13ರಂದು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಮ್ಮೇಳನವನ್ನು ಚೆನ್ಹೈನ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಪರಿಷತ್ತಿನ ಅಧ್ಯಕ್ಷ ಜೋಮನ್ ಜಾರ್ಜ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.</p>.<p>ಹೈದರಾಬಾದ್ನ ಲೆಕ್ಕಪರಿಶೋಧಕರಾದ ಅರುಣ ಶರ್ಮಾ, ದಯಾ ನಿವಾಸ ಶರ್ಮಾ, ಬೆಂಗಳೂರಿನ ವಿನಯ ತ್ಯಾಗರಾಜ, ಕೆ.ಪಿ.ನಾರಾಯಣನ್, ಮೊಹಮ್ಮದ್ ರಮೀಜ್, ಪೈಜಲ್, ಸಚಿನ ಕುಮಾರ್ ಬಿ.ಪಿ., ಮುಂಬೈನ ತನ್ಮಯ ಮೋದಿ, ಮಂದಾರ ವೈದ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ ಎಂದರು.</p>.<p>ದಾಸ ಸಾಹಿತ್ಯ ಉಪನ್ಯಾಸಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ಸುಮಾ ರಾಜಕುಮಾರ್ ಅವರು ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.</p>.<p>ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳಾದ ಹಿತೇಶ್ಕುಮಾರ್ ಮೋದಿ, ಎಚ್.ಎನ್.ಆಡಿನವರ, ಸುಭಾಶ್ ಪಾಟೀಲ, ಜಿ.ಎಂ.ಕಟ್ವಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>