‘ತಾವು ಮೂಲದಲ್ಲಿ ಹಿಂದುಗಳು ಎಂದು ಪ್ರಜ್ಞಾವಂತ ಮುಸ್ಲಿಮರು ಒಪ್ಪಿಕೊಳ್ಳುತ್ತಿದ್ದಾರೆ. ಜಾವೆದ್ ಅಕ್ತರ್, ಗುಲಾಬಿನಬಿ ಆಜಾದ್ ಅವರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪೂರ್ವಜರು ಹಿಂದೂಗಳೇ ಆಗಿದ್ದರು ಎಂದು ಹೇಳಿದ್ದಾರೆ. ಇತ್ತೀಚೆಗೆ ಅವರ ಆಲೋಚನೆಗಳು ಬದಲಾಗುತ್ತಿವೆ. ವ್ಯಾಪಾರದ ಉದ್ದೇಶದಿಂದ ದೇಶಕ್ಕೆ ಬಂದ ಕ್ರಿಶ್ಚಿಯನ್ರು ಇಲ್ಲಿಯ ದೇವಾಲಯಗಳನ್ನು ಚರ್ಚ್ಗಳೆಂದು ತಿಳಿದರು. ಅರ್ಚಕರನ್ನು ಪೀಟರ್ ಎಂದರು. ದೇಶದ ಸಂಸ್ಕೃತಿ ದೂಷಿಸಲು ಆರಂಭಿಸಿದರು. ಅನಾಗರಿಕ ಭಾರತ, ಕ್ರೌರ್ಯದ ಧರ್ಮ, ಸ್ತ್ರೀ ವಿರೋಧಿ, ಜಾತಿ ವೈಷಮ್ಯ ಎಂದೆಲ್ಲ ಹೇಳಿದರು. ನಮ್ಮನ್ನ ಸಾಂಸ್ಕೃತಿಕವಾಗಿ ಹತ್ಯೆ ಮಾಡಿ, ಮತಾಂತರ ಮಾಡಲು ಯತ್ನಿಸಿದರು. ಆದರೂ, ಭಾರತ ಸನಾತನ ಸಂಸ್ಕೃತಿಯನ್ನು ಗಟ್ಟಿತನದಿಂದ ಕಾಪಿಟ್ಟುಕೊಂಡಿದೆ’ ಎಂದು ಹೇಳಿದರು.