‘ಈ ಪ್ರಕರಣದಲ್ಲಿ ಚಂದ್ರಶೇಖರ ಇಂಡಿ ಎಂಬ ವ್ಯಕ್ತಿ ಬಂದು ಎಲ್ಲರ ಬದುಕನ್ನೇ ಹಾಳು ಮಾಡಿದ. ಈ ಬಗ್ಗೆ ದೂರು ನೀಡುವ ಬಗ್ಗೆ ನಮ್ಮ ವಕೀಲರ ಬಳಿ ಮಾತನಾಡುತ್ತೇನೆ. ಕೆಲವರಿಗೆ ಹಲವು ದೌರ್ಬಲ್ಯ ಇರುತ್ತವೆ. ನಾವು ಭಾವನೆಗಳೊಂದಿಗೆ ಬದುಕುವ ದೌರ್ಬಲ್ಯದವರಾಗಿದ್ದೇನೆ. ಕೆಲವರು ಚಾಡಿ ಕೇಳುವ ದೌರ್ಬಲ್ಯ ಹೊಂದಿರುತ್ತಾರೆ. ಈ ಚಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು’ ಎಂದು ಹೇಳಿದರು.