‘ಕಾಮಗಾರಿಗೂ ಮುನ್ನ ಉದ್ದೇಶಿತ ಮೇಲ್ಸೇತುವೆ ರಸ್ತೆ ಮಾರ್ಗದ ಸ್ಟೇಷನ್ ರಸ್ತೆ, ಕೊಪ್ಪಿಕರ ರಸ್ತೆ, ದಾಜಿಬಾನ ಪೇಟೆ, ಮೂರುಸಾವಿರ ಮಠ ರಸ್ತೆಯ ಅತಿಕ್ರಮಣವನ್ನು ತೆರವುಗೊಳಿಸಬೇಕು. ಇದಕ್ಕಾಗಿ ಹಿಂದೆಯೇ ಮಾಸ್ಟರ್ ಪ್ಲಾನ್ ಸಿದ್ದವಾಗಿದ್ದರೂ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಇದುವರೆಗೆ ಅನುಷ್ಠಾನಗೊಂಡಿಲ್ಲ. ಇದರಿಂದಾಗಿಯೇ ಮುಕ್ತ ಸಂಚಾರಕ್ಕೆ ತೊಂದರೆಯಾಗಿದೆ. ಮೊದಲು ಮಾಸ್ಟರ್ ಪ್ಲಾನ್ ಅನುಷ್ಠಾವಾಗಲಿ. ಇಲ್ಲದಿದ್ದರೆ, ಮೇಲ್ಸೇತುವೆ ಯೋಜನೆಯೂ ಮತ್ತೊಂದು ಬಿಆರ್ಟಿಎಸ್ ಯೋಜನೆಯಂತೆ ವಿಫಲವಾಗಲಿದೆ. ಇಲ್ಲದಿದ್ದರೆ ಸಂಚಾರ ದಟ್ಟಣೆಗೆ ಪರಿಹಾರವಾಗಬೇಕಾದ ಮೇಲ್ಸೇತುವೆಯೇ, ಹಲವುಸಮಸ್ಯೆಗಳನ್ನು ತಂದೊಡ್ಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.