<p><strong>ಹುಬ್ಬಳ್ಳಿ: </strong>ಕೆನಡಾದಲ್ಲಿ ವಾಸವಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಮೀರ್ ಹಮ್ಜಾ ಶೇಖ್ ಅವರ ಎಸ್ಬಿಐ ಖಾತೆಯಿಂದ ಅಕ್ರಮವಾಗಿ ₹17.21ಲಕ್ಷವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಲ್ಲಿನ ಗೋಕುಲ ರಸ್ತೆ ನೆಹರೂನಗರದಲ್ಲಿರುವ ಎಸ್ಬಿಐ ಶಾಖೆಯ ಸಹಾಯಕ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.</p>.<p>2018 ಆಗಸ್ಟ್ 4ರಿಂದ 2019 ಮೇ 6ರವರೆಗೆ ಹಂತ ಹಂತವಾಗಿ ಎಂಟು ಮಂದಿಯ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಮೊಹಮ್ಮದ್ ಅಜರುದ್ದೀನ್ ಅವರು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದರು. ಈ ವ್ಯವಸ್ಥೆಯಡಿ ಗ್ರಾಹಕರ ಒಪ್ಪಿಗೆ ಪಡೆದೇ ಹಣ ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಗ್ರಾಹಕರ ಅನುಮತಿ ಇಲ್ಲದೇ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅದೇ ಬ್ಯಾಂಕ್ ನೌಕರ ರೋಹಿತ್ ರಘು ಸೋನವಾಣೆ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>2018 ಆಗಸ್ಟ್ 4ರಂದು ಅಮ್ರೀನ್ ಮೊಹಮದ್ ಅಜರುದ್ದೀನ್ ಮನಿಯಾರ್ ಎಂಬುವರ ಖಾತೆ ₹1.90 ಲಕ್ಷ, 2018 ಆಗಸ್ಟ್ 16ರಂದು ರಮೇಶ್ ಡಿ.ಅರಟ್ಟಿ ಖಾತೆಗೆ ₹2 ಲಕ್ಷ, 2018 ಅಕ್ಟೋಬರ್ 11ರಂದು ರುದ್ರಗೌಡ ಸಿದ್ದನಗೌಡ ಪಾಟೀಲರ ಖಾತೆಗೆ ₹6 ಲಕ್ಷ, 2019 ಫೆಬ್ರುವರಿ 2ರಂದು ಶಾರದಾ ಹೊಸಮನಿ ಅವರ ಖಾತೆಗೆ ₹2.31,320 ಲಕ್ಷ, ಮಾರ್ಚ್ 20 ರಂದು ಸಲೀಂ ಮಕ್ತುಮ್ ಹುಸೇನ್ ಮನಿಯಾರ್ ಖಾತೆಗೆ ₹50 ಸಾವಿರ, ಅದೇ ದಿನ ಹುಸೇನ್ ಸಾಬ್ ನಾಲಬಂದ ಖಾತೆಗೆ ₹2 ಲಕ್ಷ, ಏಪ್ರಿಲ್ 22ರಂದು ಸಲೀಂ ಮುಕ್ತಮ್ ಹುಸೇನ್ ಮನಿಯಾರ್ ಖಾತೆಗೆ ₹1.50 ಲಕ್ಷ ಹಾಗೂ ಮೇ 6ರಂದು ರಮೇಶ್ ಡಿ.ಅರಟ್ಟಿ ಖಾತೆಗೆ ₹1 ಲಕ್ಷ ಸೇರಿ ಒಟ್ಟು ₹17,21,320 ವರ್ಗಾವಣೆಯಾಗಿದೆ.</p>.<p>ಬ್ಯಾಂಕ್ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಗೋಕುಲ ರಸ್ತೆ ಪೊಲೀಸ್ ಠಾಣೆ ಪಿಎಸ್ಐ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಕೆನಡಾದಲ್ಲಿ ವಾಸವಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಮೀರ್ ಹಮ್ಜಾ ಶೇಖ್ ಅವರ ಎಸ್ಬಿಐ ಖಾತೆಯಿಂದ ಅಕ್ರಮವಾಗಿ ₹17.21ಲಕ್ಷವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಲ್ಲಿನ ಗೋಕುಲ ರಸ್ತೆ ನೆಹರೂನಗರದಲ್ಲಿರುವ ಎಸ್ಬಿಐ ಶಾಖೆಯ ಸಹಾಯಕ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.</p>.<p>2018 ಆಗಸ್ಟ್ 4ರಿಂದ 2019 ಮೇ 6ರವರೆಗೆ ಹಂತ ಹಂತವಾಗಿ ಎಂಟು ಮಂದಿಯ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಮೊಹಮ್ಮದ್ ಅಜರುದ್ದೀನ್ ಅವರು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದರು. ಈ ವ್ಯವಸ್ಥೆಯಡಿ ಗ್ರಾಹಕರ ಒಪ್ಪಿಗೆ ಪಡೆದೇ ಹಣ ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಗ್ರಾಹಕರ ಅನುಮತಿ ಇಲ್ಲದೇ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅದೇ ಬ್ಯಾಂಕ್ ನೌಕರ ರೋಹಿತ್ ರಘು ಸೋನವಾಣೆ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.</p>.<p>2018 ಆಗಸ್ಟ್ 4ರಂದು ಅಮ್ರೀನ್ ಮೊಹಮದ್ ಅಜರುದ್ದೀನ್ ಮನಿಯಾರ್ ಎಂಬುವರ ಖಾತೆ ₹1.90 ಲಕ್ಷ, 2018 ಆಗಸ್ಟ್ 16ರಂದು ರಮೇಶ್ ಡಿ.ಅರಟ್ಟಿ ಖಾತೆಗೆ ₹2 ಲಕ್ಷ, 2018 ಅಕ್ಟೋಬರ್ 11ರಂದು ರುದ್ರಗೌಡ ಸಿದ್ದನಗೌಡ ಪಾಟೀಲರ ಖಾತೆಗೆ ₹6 ಲಕ್ಷ, 2019 ಫೆಬ್ರುವರಿ 2ರಂದು ಶಾರದಾ ಹೊಸಮನಿ ಅವರ ಖಾತೆಗೆ ₹2.31,320 ಲಕ್ಷ, ಮಾರ್ಚ್ 20 ರಂದು ಸಲೀಂ ಮಕ್ತುಮ್ ಹುಸೇನ್ ಮನಿಯಾರ್ ಖಾತೆಗೆ ₹50 ಸಾವಿರ, ಅದೇ ದಿನ ಹುಸೇನ್ ಸಾಬ್ ನಾಲಬಂದ ಖಾತೆಗೆ ₹2 ಲಕ್ಷ, ಏಪ್ರಿಲ್ 22ರಂದು ಸಲೀಂ ಮುಕ್ತಮ್ ಹುಸೇನ್ ಮನಿಯಾರ್ ಖಾತೆಗೆ ₹1.50 ಲಕ್ಷ ಹಾಗೂ ಮೇ 6ರಂದು ರಮೇಶ್ ಡಿ.ಅರಟ್ಟಿ ಖಾತೆಗೆ ₹1 ಲಕ್ಷ ಸೇರಿ ಒಟ್ಟು ₹17,21,320 ವರ್ಗಾವಣೆಯಾಗಿದೆ.</p>.<p>ಬ್ಯಾಂಕ್ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಗೋಕುಲ ರಸ್ತೆ ಪೊಲೀಸ್ ಠಾಣೆ ಪಿಎಸ್ಐ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>