ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ: ಸ್ವಯಂ ನಿವೃತ್ತಿಗೆ ಹೆಡ್‌ ಕಾನ್‌ಸ್ಟೆಬಲ್‌ ಮೊರೆ

ಅವಧಿ ಮುಗಿಯದಿದ್ದರೂ ಸಾರ್ವತ್ರಿಕ ವರ್ಗಾವಣೆಗೆ ಪರಿಗಣನೆ: ಆಪಾದನೆ
Published 24 ಜೂನ್ 2023, 6:49 IST
Last Updated 24 ಜೂನ್ 2023, 6:49 IST
ಅಕ್ಷರ ಗಾತ್ರ

ಧಾರವಾಡ: ವರ್ಗಾವಣೆ ಮಾಡಿದ್ದಕ್ಕೆ ಮನನೊಂದು ಆಳ್ನಾವರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಆರ್‌.ಎನ್‌.ಗೊರಗುದ್ದಿ ಅವರು ಸ್ವಯ ನಿವೃತ್ತಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ಧಾರೆ.

ಇದೇ 21ರಂದು ಜಿಲ್ಲಾ ಪೊಲೀಸ್‌ ಕಚೇರಿಯ ಟಪಾಲು ವಿಭಾಗಕ್ಕೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದಲ್ಲಿ ಸಾರಾಂಶ ಇಂತಿದೆ.

ಐದು ವರ್ಷ ಅವಧಿ ಪೂರ್ಣಗೊಳ್ಳದಿದ್ದರೂ ಸಾರ್ವತ್ರಿಕ ವರ್ಗಾವಣೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಕೋರಿಕೆಯ ಮೇರೆಗೆ ಎಂದು ಡಿಸಿಆರ್‌ಬಿಯಿಂದ ಅಳ್ನಾವರ ಠಾಣೆಗೆ ವರ್ಗಾಯಿಸಲಾಗಿದೆ. ಇದರಿಂದ ಮನಸ್ಸಿಗೆ ಆಘಾತವಾಗಿದೆ.

ನಮ್ಮದು ಅವಿಭಕ್ತ ಕುಟುಂಬ. ತಂದೆ ಹೃದಯ ಕಾಯಿಲೆಯಿಂದ, ತಾಯಿ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಕುಟುಂಬದಲ್ಲಿ ನಾನೊಬ್ಬನೇ ಸರ್ಕಾರಿ ನೌಕರ. ಎಲ್ಲ ಜವಾಬ್ದಾರಿ ನನ್ನ ಮೇಲಿದೆ.

ಪೋಷಕರ ಪಾಲನೆಗಾಗಿ 2008ರಲ್ಲಿ ಹಾವೇರಿ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಸೇವಾ ಜೇಷ್ಠತೆ ಬಿಟ್ಟು ವರ್ಗಾವಣೆಯಾಗಿದ್ದೆ. ಕಿರಿಯ ನೌಕರರಾದ ನಾವು ನಿಮ್ಮ ಮುಂದೆ

ಕುಂದು ಕೊರತೆ ಹೇಳಿದರೆ ಅಮಾನತುಗೊಳಿಸುವಿರಿ ಅಥವಾ ಸೇವೆಯಿಂದ ವಜಾಗೊಳಿಸುವಿರಿ ಎಂಬ ಭಯಕ್ಕೆ ತೊಂದರೆಗಳನ್ನುನಮ್ಮಲ್ಲಿಯೇ ಅನುಭವಿಸಿದ್ದೇನೆ. ಒಂದು ತರಹ ಖಿನ್ನತೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ.

ವರ್ಗಾವಣೆ ಮಾಡುವ ಸಮಯದಲ್ಲಿ ಹಿರಿಯ ಅಧಿಕಾರಿಗಳಿಂದಲೂ ನನ್ನ ಕುಂದು ಕೊರತೆಯ ಬಗ್ಗೆ ತಿಳಿಸಿದರೂ ಕುಟುಂಬದ ಜೊತೆಗೆ ಇದ್ದುಕೊಂಡು ಇಲಾಖೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡದೆ ಇಲಾಖೆಯ ಮೇಲೆಯೇ ಅಸಹ್ಯ ಪಡುವಂತೆ ಮಾನಸಿಕ ಹಿಂಸೆ ಕೊಟ್ಟದ್ದು ಇರುತ್ತದೆ. ಡಿಸಿಆರ್‌ಬಿ ವಿಭಾಗದಿಂದ ಅಳ್ನಾವರ ಪೊಲೀಸ್ ಠಾಣೆಗೆ ಹೋಗಿ ಕಾರ್ಯನಿರ್ವಹಿಸಲು ಬಿಡದೆ ಮತ್ತೆ ಡಿಪಿಓಗೆ ಕೆಲವು ಪ್ರಕರಣಗಳ ಕಾರ್ಯಕ್ಕೆ ಕರೆಯಿಸಿದ್ದರಿಂದ ಮಾನಸಿಕ ಹಿಂಸೆಯಾಗಿದೆ. ಈವರೆಗೆ 27 ವರ್ಷ 08 ತಿಂಗಳು ಕಾರ್ಯನಿರ್ವಹಿಸಿದ್ದೇನೆ. ಇನ್ನು9 ವರ್ಷ ಸೇವಾವಧಿ ಇದೆ. ಬಾಕಿ ಸೇವಾವಧಿಯನ್ನು ಊರ್ಜಿತಗೊಳಿಸಿ 30ವರ್ಷ ಸೇವೆ ಅಂತ ಪರಿಗಣಿಸಿ ಪೂರ್ಣ ನಿವೃತ್ತಿ ವೇತನ ಹಾಗೂ ಸೌಲಭ್ಯ ಮಂಜೂರು ಮಾಡಿ, ಸ್ವಯಂ ನಿವೃತ್ತಿ ಘೋಷಿಸಬೇಕು ಎಂದು ಕೋರಿದ್ದಾರೆ.

‘ಒಂದು ಠಾಣೆಯಲ್ಲಿ ಐದು ವರ್ಷ ಕಾರ್ಯನಿರ್ವಹಿಸಿವರನ್ನು ಮತ್ತೊಂದು ಕಡೆಗೆ ವರ್ಗಾವಣೆ ಮಾಡುತ್ತೇವೆ.ಇಲಾಖೆಯ ಮಾನದಂಡ ಪ್ರಕಾರ ಸಾರ್ವತ್ರಿಕ ವರ್ಗಾವಣೆಯಲ್ಲಿ 74 ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಆರ್‌.ಎನ್‌.ಗೊರಗುದ್ದಿ ಅವರೂ ಒಬ್ಬರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT