<p><strong>ಧಾರವಾಡ:</strong> ವಿಮಾದಾರಗೆ ವಾಹನ ರಿಪೇರಿ ಬಿಲ್ ಪಾವತಿಸಲು ನಿರಾಕರಿಸಿದ ಪ್ರಕರಣದಲ್ಲಿ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ವಾಹನ ರಿಪೇರಿ ಹಣವನ್ನು ಬಡ್ಡಿಸಮೇತ ಸಂದಾಯ ಮಾಡಲು ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ಪ್ರಕರಣದ ವೆಚ್ಚ ₹10 ಸಾವಿರ ಹಾಗೂ ವಾಹನ ರಿಪೇರಿ ವೆಚ್ಚವನ್ನು ವಿಮಾದಾರಗೆ ಪಾವತಿಸಲು ಆದೇಶಿಸಿದ್ದಾರೆ.</p>.<p>ಏನಿದು ಪ್ರಕರಣ?: ಕಲಘಟಗಿ ತಾಲ್ಲೂಕಿನ ಆಲದಕಟ್ಟಿಯ ಫಕೀರಪ್ಪ ಹರಿಜನ ಅವರು 2020ರಲ್ಲಿ ಟಾಟಾ ಟ್ರಕ್ ಖರೀದಿಸಿ, ವಾಹನ ವಿಮೆ ಮಾಡಿಸಿದ್ದರು.</p>.<p>ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿಯಲ್ಲಿಅಪಘಾತ ಸಂಭವಿಸಿ ಟ್ರಕ್ ಜಖಂಗೊಂಡಿತ್ತು. ಹುಬ್ಬಳ್ಳಿಯ ಮಾನಿಕಬಾಗ್ ಆಟೊಮೊಬೈಲ್ಸ್ನಲ್ಲಿ ಟ್ರಕ್ ರಿಪೇರಿಗೆ ₹10.02 ಲಕ್ಷ ಪಾವತಿಸಲು ತಿಳಿಸಿದ್ದರು. ವಿಮಾ ಕಂಪನಿಯ ಸಮೀಕ್ಷೆದಾರ ವಾಹನ ರಿಪೇರಿ ವೆಚ್ಚ ₹8.47 ಲಕ್ಷ ಎಂದು ವರದಿ ನೀಡಿದ್ದರು.</p>.<p>ರಿಪೇರಿ ಹಣ ಪಾವತಿಸುವಂತೆ ಫಕೀರಪ್ಪ ವಿಮಾ ಕಂಪನಿಗೆ ಮನವಿ ಸಲ್ಲಿಸಿದ್ದರು. ವಿಮಾ ಕಂಪನಿಯವರು ₹4.9 ಲಕ್ಷ ಸಂದಾಯ ಮಾಡಿ ಬಾಕಿ ಹಣ ಪಾವತಿಸಲು ನಿರಾಕರಿಸಿದ್ದರು. ವಿಮಾ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಕೀರಪ್ಪ ದೂರು ಸಲ್ಲಿಸಿದ್ದರು.</p>.<p>ವಿಮಾ ಕಂಪನಿಯು ಬಾಕಿ ₹3.45 ಲಕ್ಷಕ್ಕೆ 2024 ಜೂನ್ 28ರಿಂದ ವಾರ್ಷಿಕ ಶೇ 10 ಬಡ್ಡಿ ಲೆಕ್ಕ ಹಾಕಿ ವಿಮಾದಾರಗೆ ಪಾವತಿಸಬೇಕು, ಪರಿಹಾರ ಮತ್ತು ಪ್ರಕರಣದ ವೆಚ್ಚ ನೀಡಬೇಕು ಎಂದು ಆಯೋಗ ಆದೇಶಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ವಿಮಾದಾರಗೆ ವಾಹನ ರಿಪೇರಿ ಬಿಲ್ ಪಾವತಿಸಲು ನಿರಾಕರಿಸಿದ ಪ್ರಕರಣದಲ್ಲಿ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ವಾಹನ ರಿಪೇರಿ ಹಣವನ್ನು ಬಡ್ಡಿಸಮೇತ ಸಂದಾಯ ಮಾಡಲು ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ಪ್ರಕರಣದ ವೆಚ್ಚ ₹10 ಸಾವಿರ ಹಾಗೂ ವಾಹನ ರಿಪೇರಿ ವೆಚ್ಚವನ್ನು ವಿಮಾದಾರಗೆ ಪಾವತಿಸಲು ಆದೇಶಿಸಿದ್ದಾರೆ.</p>.<p>ಏನಿದು ಪ್ರಕರಣ?: ಕಲಘಟಗಿ ತಾಲ್ಲೂಕಿನ ಆಲದಕಟ್ಟಿಯ ಫಕೀರಪ್ಪ ಹರಿಜನ ಅವರು 2020ರಲ್ಲಿ ಟಾಟಾ ಟ್ರಕ್ ಖರೀದಿಸಿ, ವಾಹನ ವಿಮೆ ಮಾಡಿಸಿದ್ದರು.</p>.<p>ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿಯಲ್ಲಿಅಪಘಾತ ಸಂಭವಿಸಿ ಟ್ರಕ್ ಜಖಂಗೊಂಡಿತ್ತು. ಹುಬ್ಬಳ್ಳಿಯ ಮಾನಿಕಬಾಗ್ ಆಟೊಮೊಬೈಲ್ಸ್ನಲ್ಲಿ ಟ್ರಕ್ ರಿಪೇರಿಗೆ ₹10.02 ಲಕ್ಷ ಪಾವತಿಸಲು ತಿಳಿಸಿದ್ದರು. ವಿಮಾ ಕಂಪನಿಯ ಸಮೀಕ್ಷೆದಾರ ವಾಹನ ರಿಪೇರಿ ವೆಚ್ಚ ₹8.47 ಲಕ್ಷ ಎಂದು ವರದಿ ನೀಡಿದ್ದರು.</p>.<p>ರಿಪೇರಿ ಹಣ ಪಾವತಿಸುವಂತೆ ಫಕೀರಪ್ಪ ವಿಮಾ ಕಂಪನಿಗೆ ಮನವಿ ಸಲ್ಲಿಸಿದ್ದರು. ವಿಮಾ ಕಂಪನಿಯವರು ₹4.9 ಲಕ್ಷ ಸಂದಾಯ ಮಾಡಿ ಬಾಕಿ ಹಣ ಪಾವತಿಸಲು ನಿರಾಕರಿಸಿದ್ದರು. ವಿಮಾ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಕೀರಪ್ಪ ದೂರು ಸಲ್ಲಿಸಿದ್ದರು.</p>.<p>ವಿಮಾ ಕಂಪನಿಯು ಬಾಕಿ ₹3.45 ಲಕ್ಷಕ್ಕೆ 2024 ಜೂನ್ 28ರಿಂದ ವಾರ್ಷಿಕ ಶೇ 10 ಬಡ್ಡಿ ಲೆಕ್ಕ ಹಾಕಿ ವಿಮಾದಾರಗೆ ಪಾವತಿಸಬೇಕು, ಪರಿಹಾರ ಮತ್ತು ಪ್ರಕರಣದ ವೆಚ್ಚ ನೀಡಬೇಕು ಎಂದು ಆಯೋಗ ಆದೇಶಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>