<p><strong>ಹುಬ್ಬಳ್ಳಿ:</strong> ಇಲ್ಲಿನ ಬೈರಿದೇವರಕೊಪ್ಪದ ವೀರ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ವಾಸವಾಗಿರುವ ಕೆ.ಸಿ.ಸಿ. ಬ್ಯಾಂಕ್ನ ನಿವೃತ್ತ ಉದ್ಯೋಗಿ ಪ್ರಭುಗೌಡ ಎಸ್.ಪಾಟೀಲ ಎಂಬುವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ₹15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಆಭರಣಗಳು ಕಳವಾಗಿವೆ.</p>.<p>ಮನೆಗೆ ಹಿಂಬಾಗಿಲಿನ ಮೂಲಕ ಒಳ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಪ್ರಭುಗೌಡ ಅವರು ಮಗನ ಮದುವೆಗಾಗಿ ಮಾಡಿಸಿಟ್ಟಿದ್ದ 30 ತೊಲೆ ಬಂಗಾರ, ಬೆಳ್ಳಿ ಆಭರಣ ಮತ್ತು ₹12 ಸಾವಿರ ನಗದು ಕಳ್ಳತನವಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಪಾಟೀಲರ ಪತ್ನಿ ಅಲ್ಮೇರಾ ತೆಗೆದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯವರು ಕೆಲ ಹೊತ್ತು ಮನೆಯ ಸುತ್ತಲೂ ಹುಡುಕಿದ ಬಳಿಕ ನವನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.<p>ಕಳವಾದ ಕೊಠಡಿಯ ಪಕ್ಕದಲ್ಲೇ ಪಾಟೀಲ ದಂಪತಿ ಮಲಗಿದ್ದರು. ಮಗ, ಮಗಳು ಹಾಗೂ ಮೊಮ್ಮಗಳು ಸೇರಿದಂತೆ ಒಟ್ಟು ಐವರು ಜನ ಮನೆಯಲ್ಲಿದ್ದರು. ಪಾಟೀಲರ ಮಗನ ಮದುವೆ ಏಪ್ರಿಲ್ನಲ್ಲಿ ನಿಗದಿಯಾಗಿತ್ತು. ಕೊರೊನಾ ಲಾಕ್ಡೌನ್ ಕಾರಣದಿಂದ ಮದುವೆ ಮುಂಡೂಡಲಾಗಿತ್ತು. ಆದ್ದರಿಂದ ಆಭರಣಗಳನ್ನು ಮನೆಯಲ್ಲಿಯೇ ಇಡಲಾಗಿತ್ತು.</p>.<p>ನವನಗರ ಇನ್ಸ್ಟೆಕ್ಟರ್ ಪ್ರಭು ಸೂರಿನ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಮೂವರು ಇದ್ದ ತಂಡ ಅದೇ ಬಡಾವಣೆಯ ಮೂರ್ನಾಲ್ಕು ಮನೆಗಳ ಸುತ್ತಾಡಿದೆ ಎಂಬುದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇಲ್ಲಿನ ಬೈರಿದೇವರಕೊಪ್ಪದ ವೀರ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ವಾಸವಾಗಿರುವ ಕೆ.ಸಿ.ಸಿ. ಬ್ಯಾಂಕ್ನ ನಿವೃತ್ತ ಉದ್ಯೋಗಿ ಪ್ರಭುಗೌಡ ಎಸ್.ಪಾಟೀಲ ಎಂಬುವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ₹15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಆಭರಣಗಳು ಕಳವಾಗಿವೆ.</p>.<p>ಮನೆಗೆ ಹಿಂಬಾಗಿಲಿನ ಮೂಲಕ ಒಳ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಪ್ರಭುಗೌಡ ಅವರು ಮಗನ ಮದುವೆಗಾಗಿ ಮಾಡಿಸಿಟ್ಟಿದ್ದ 30 ತೊಲೆ ಬಂಗಾರ, ಬೆಳ್ಳಿ ಆಭರಣ ಮತ್ತು ₹12 ಸಾವಿರ ನಗದು ಕಳ್ಳತನವಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಪಾಟೀಲರ ಪತ್ನಿ ಅಲ್ಮೇರಾ ತೆಗೆದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯವರು ಕೆಲ ಹೊತ್ತು ಮನೆಯ ಸುತ್ತಲೂ ಹುಡುಕಿದ ಬಳಿಕ ನವನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.<p>ಕಳವಾದ ಕೊಠಡಿಯ ಪಕ್ಕದಲ್ಲೇ ಪಾಟೀಲ ದಂಪತಿ ಮಲಗಿದ್ದರು. ಮಗ, ಮಗಳು ಹಾಗೂ ಮೊಮ್ಮಗಳು ಸೇರಿದಂತೆ ಒಟ್ಟು ಐವರು ಜನ ಮನೆಯಲ್ಲಿದ್ದರು. ಪಾಟೀಲರ ಮಗನ ಮದುವೆ ಏಪ್ರಿಲ್ನಲ್ಲಿ ನಿಗದಿಯಾಗಿತ್ತು. ಕೊರೊನಾ ಲಾಕ್ಡೌನ್ ಕಾರಣದಿಂದ ಮದುವೆ ಮುಂಡೂಡಲಾಗಿತ್ತು. ಆದ್ದರಿಂದ ಆಭರಣಗಳನ್ನು ಮನೆಯಲ್ಲಿಯೇ ಇಡಲಾಗಿತ್ತು.</p>.<p>ನವನಗರ ಇನ್ಸ್ಟೆಕ್ಟರ್ ಪ್ರಭು ಸೂರಿನ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಮೂವರು ಇದ್ದ ತಂಡ ಅದೇ ಬಡಾವಣೆಯ ಮೂರ್ನಾಲ್ಕು ಮನೆಗಳ ಸುತ್ತಾಡಿದೆ ಎಂಬುದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>