ಸೋಮವಾರ ದುರ್ಗಾಷ್ಠಮಿ, ಮಂಗಳವಾರ ಮಹಾನವಮಿ ಅಂಗವಾಗಿ ಖಂಡೆ ಪೂಜೆ ಹಾಗೂ ಬುಧವಾರ ವಿಜಯದಶಮಿ ಅಂಗವಾಗಿ ಬನ್ನಿಪೂಜೆ ನಡೆಯಲಿದೆ. ಅಂದು ಮಧ್ಯಾಹ್ನ 4 ಗಂಟೆಗೆ ದೇವಿಯರ ಉತ್ಸವ ಮೂರ್ತಿಯನ್ನು ಊರ ಹೊರಗೆ ಮೆರವಣಿಗೆಯಲ್ಲಿ ಕರೆದೊಯ್ದು, ಪೂಜೆ ಸಲ್ಲಿಸಿ, ಬನ್ನಿಪತ್ರೆಯೊಂದಿಗೆ ರಾತ್ರಿ 8ರ ಸುಮಾರಿಗೆ ದೇವಸ್ಥಾನಕ್ಕೆ ಹಿಂದಿರುಗುತ್ತದೆ. ನೂರಾರು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು, ದೇವಿಯರಿಗೆ ಪೂಜೆ ಸಲ್ಲಿಸುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯವಾಗಿದೆ.