<p>ಅಣ್ಣಿಗೇರಿ: ‘ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸಮಾನತೆಯ ಹಾಗೂ ಜಾತಿರಹಿತ ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಅವರ ಅನುಭವ ಮಂಟಪ ಪರಿಕಲ್ಪನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೊಂಡಿತ್ತು’ ಎಂದು ಚರಂತೇಶ್ವರ ವಿರಕ್ತಮಠದ ಬಸವ ಬೆಳವಿ ಶರಣಬಸವ ದೇವರು ಹೇಳಿದರು.</p>.<p>ಪಟ್ಟಣದ ನಿಂಗಮ್ಮ ಎಸ್.ಹೂಗಾರ ಸಮೂಹ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಲಿಂ.ಗುದ್ನೇಶ್ವರ ಸ್ವಾಮೀಜಿ ಸುವರ್ಣ ಮಹೋತ್ಸವದ ಮಂಗಳವಾರ ನಡೆದ ‘ಜೀವನ ದರ್ಶನ ಪ್ರವಚನ‘ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಸವಾದಿ ಶರಣರ ಅರಿವು, ಆಚಾರ, ಅನುಭವದಿಂದ ರಚಿತವಾದ ವಚನಗಳಲ್ಲಿ ಬಸವತತ್ವ ದರ್ಶನವಿದೆ. ಭಾರತೀಯ ದಾರ್ಶನಿಕ ಪರಂಪರೆಯ ಕೆನೆಯಾಗಿರುವ ಬಸವತತ್ವ ದರ್ಶನದಲ್ಲಿ ಗುರುತತ್ತ್ವ ಅಮೂಲ್ಯವಾಗಿದೆ’ ಎಂದರು. </p>.<p>ಧರ್ಮಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾದ ಅವಶ್ಯವಿದೆ‘ ಎಂದು ಹೇಳಿದರು.</p>.<p>ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಶರಣಬಸಪ್ಪನವರು ದೇಶಮುಖ, ಬಸಪ್ಪ ಕರ್ಲವಾಡ, ಕಲ್ಲಪ್ಪ ಬಾಳಿಕಾಯಿ, ಗುರುಸಿದ್ದಪ್ಪ ಕೊಪ್ಪದ, ಷಣ್ಮುಖ ಗುರಿಕಾರ, ಪ್ರಕಾಶ ಬಳ್ಳೊಳ್ಳಿ, ವಿರೇಶ ಶಾನಭೋಗರ, ಚಂಬಣ್ಣ ಹಾಳದೋಟರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಣ್ಣಿಗೇರಿ: ‘ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸಮಾನತೆಯ ಹಾಗೂ ಜಾತಿರಹಿತ ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಅವರ ಅನುಭವ ಮಂಟಪ ಪರಿಕಲ್ಪನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೊಂಡಿತ್ತು’ ಎಂದು ಚರಂತೇಶ್ವರ ವಿರಕ್ತಮಠದ ಬಸವ ಬೆಳವಿ ಶರಣಬಸವ ದೇವರು ಹೇಳಿದರು.</p>.<p>ಪಟ್ಟಣದ ನಿಂಗಮ್ಮ ಎಸ್.ಹೂಗಾರ ಸಮೂಹ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಲಿಂ.ಗುದ್ನೇಶ್ವರ ಸ್ವಾಮೀಜಿ ಸುವರ್ಣ ಮಹೋತ್ಸವದ ಮಂಗಳವಾರ ನಡೆದ ‘ಜೀವನ ದರ್ಶನ ಪ್ರವಚನ‘ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಸವಾದಿ ಶರಣರ ಅರಿವು, ಆಚಾರ, ಅನುಭವದಿಂದ ರಚಿತವಾದ ವಚನಗಳಲ್ಲಿ ಬಸವತತ್ವ ದರ್ಶನವಿದೆ. ಭಾರತೀಯ ದಾರ್ಶನಿಕ ಪರಂಪರೆಯ ಕೆನೆಯಾಗಿರುವ ಬಸವತತ್ವ ದರ್ಶನದಲ್ಲಿ ಗುರುತತ್ತ್ವ ಅಮೂಲ್ಯವಾಗಿದೆ’ ಎಂದರು. </p>.<p>ಧರ್ಮಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾದ ಅವಶ್ಯವಿದೆ‘ ಎಂದು ಹೇಳಿದರು.</p>.<p>ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಶರಣಬಸಪ್ಪನವರು ದೇಶಮುಖ, ಬಸಪ್ಪ ಕರ್ಲವಾಡ, ಕಲ್ಲಪ್ಪ ಬಾಳಿಕಾಯಿ, ಗುರುಸಿದ್ದಪ್ಪ ಕೊಪ್ಪದ, ಷಣ್ಮುಖ ಗುರಿಕಾರ, ಪ್ರಕಾಶ ಬಳ್ಳೊಳ್ಳಿ, ವಿರೇಶ ಶಾನಭೋಗರ, ಚಂಬಣ್ಣ ಹಾಳದೋಟರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>