ಮೂಲತ: ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ತೋಗನೂರ ಗ್ರಾಮದ ವಾಚೇದಮಠ ಅವರು 1958ರಲ್ಲಿ ಚಿತ್ರಕಲಾ ಶಿಕ್ಷಕರ ಪರೀಕ್ಷೆಯಲ್ಲಿ ಮುಂಬೈ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಸವದತ್ತಿಯಲ್ಲಿ ಬಸವರೂಪ ಪ್ರದರ್ಶನ, ಗಾಂಧಿ ದರ್ಶನ, ಹುಬ್ಬಳ್ಳಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಸಾವಿರಾರು ರೇಖಾಚಿತ್ರಗಳನ್ನು, ಸಂಯೋಜನೆಗಳನ್ನು ಮತ್ತು ಭಾವಚಿತ್ರಗಳನ್ನು ರಚಿಸಿದ್ದಾರೆ.