ದಾವಣಗೆರೆ: ಆಸ್ತಿ ತೆರಿಗೆ ಕಟ್ಟಲು ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಹಾಗಾಗಿ ಎಲ್ಲವೂ ಆನ್ಲೈನ್ ಎಂಟ್ರಿ ಆಗಬೇಕು. ಕಾಂಗ್ರೆಸ್ನ ವಿರೋಧದ ನಡುವೆ ಅವಸರದಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ತೆರಿಗೆ ಕಟ್ಟಲು ಬೇಕಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ರಿಯಾಯಿತಿಯಲ್ಲಿ ಕಟ್ಟುವ ಅವಧಿ ಮತ್ತು ದಂಡ ರಹಿತವಾಗಿ ತೆರಿಗೆ ಕಟ್ಟುವ ಅವಧಿ ವಿಸ್ತರಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಒತ್ತಾಯಿಸಿದ್ದಾರೆ.