<p>ದಾವಣಗೆರೆ: ಆಸ್ತಿ ತೆರಿಗೆ ಕಟ್ಟಲು ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಹಾಗಾಗಿ ಎಲ್ಲವೂ ಆನ್ಲೈನ್ ಎಂಟ್ರಿ ಆಗಬೇಕು. ಕಾಂಗ್ರೆಸ್ನ ವಿರೋಧದ ನಡುವೆ ಅವಸರದಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ತೆರಿಗೆ ಕಟ್ಟಲು ಬೇಕಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ರಿಯಾಯಿತಿಯಲ್ಲಿ ಕಟ್ಟುವ ಅವಧಿ ಮತ್ತು ದಂಡ ರಹಿತವಾಗಿ ತೆರಿಗೆ ಕಟ್ಟುವ ಅವಧಿ ವಿಸ್ತರಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಒತ್ತಾಯಿಸಿದ್ದಾರೆ.</p>.<p>ಏಪ್ರಿಲ್ 30ರ ಒಳಗೆ ತೆರಿಗೆ ಕಟ್ಟಿದರೆ ಶೇ 5 ರಿಯಾಯಿತಿ ನೀಡಲಾಗುತ್ತಿತ್ತು. ಮೇ ಮತ್ತು ಜೂನ್ನಲ್ಲಿ ಕಟ್ಟಿದರೆ ದಂಡ ಇರಲಿಲ್ಲ. ಈ ಬಾರಿ ಆನ್ಲೈನ್ ಎಂಟ್ರಿ ಪದ್ಧತಿ ಅನುಷ್ಠಾನಕ್ಕೆ ಬಾರದೇ ಇರುವುದರಿಂದ ಜನರಿಗೆ ಕಂದಾಯ ಪಾವತಿ ಮಾಡಲು ಆಗುತ್ತಿಲ್ಲ. ಹಾಗಾಗಿ ಶೇ 5 ರಿಯಾಯಿತಿಯಲ್ಲಿ ಕಂದಾಯ ಕಟ್ಟುವುದನ್ನು ಮೇ ಅಂತ್ಯದವರೆಗೆ ವಿಸ್ತರಿಸಬೇಕು. ದಂಡರಹಿತವಾಗಿ ಕಂದಾಯ ಪಾವತಿಸಲು ಮತ್ತೆ ಮೂರು ತಿಂಗಳು ಅಂದರೆ ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಆಸ್ತಿ ತೆರಿಗೆ ಕಟ್ಟಲು ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಹಾಗಾಗಿ ಎಲ್ಲವೂ ಆನ್ಲೈನ್ ಎಂಟ್ರಿ ಆಗಬೇಕು. ಕಾಂಗ್ರೆಸ್ನ ವಿರೋಧದ ನಡುವೆ ಅವಸರದಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ತೆರಿಗೆ ಕಟ್ಟಲು ಬೇಕಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ರಿಯಾಯಿತಿಯಲ್ಲಿ ಕಟ್ಟುವ ಅವಧಿ ಮತ್ತು ದಂಡ ರಹಿತವಾಗಿ ತೆರಿಗೆ ಕಟ್ಟುವ ಅವಧಿ ವಿಸ್ತರಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಒತ್ತಾಯಿಸಿದ್ದಾರೆ.</p>.<p>ಏಪ್ರಿಲ್ 30ರ ಒಳಗೆ ತೆರಿಗೆ ಕಟ್ಟಿದರೆ ಶೇ 5 ರಿಯಾಯಿತಿ ನೀಡಲಾಗುತ್ತಿತ್ತು. ಮೇ ಮತ್ತು ಜೂನ್ನಲ್ಲಿ ಕಟ್ಟಿದರೆ ದಂಡ ಇರಲಿಲ್ಲ. ಈ ಬಾರಿ ಆನ್ಲೈನ್ ಎಂಟ್ರಿ ಪದ್ಧತಿ ಅನುಷ್ಠಾನಕ್ಕೆ ಬಾರದೇ ಇರುವುದರಿಂದ ಜನರಿಗೆ ಕಂದಾಯ ಪಾವತಿ ಮಾಡಲು ಆಗುತ್ತಿಲ್ಲ. ಹಾಗಾಗಿ ಶೇ 5 ರಿಯಾಯಿತಿಯಲ್ಲಿ ಕಂದಾಯ ಕಟ್ಟುವುದನ್ನು ಮೇ ಅಂತ್ಯದವರೆಗೆ ವಿಸ್ತರಿಸಬೇಕು. ದಂಡರಹಿತವಾಗಿ ಕಂದಾಯ ಪಾವತಿಸಲು ಮತ್ತೆ ಮೂರು ತಿಂಗಳು ಅಂದರೆ ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>