ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ದೀಪಾವಳಿ: ಮಣ್ಣಿನ ಹಣತೆಯ ಮೆರಗು 

ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಹಣತೆ ಮಾರಾಟ, ಖರೀದಿ ಜೋರು
ಮಂಜು ಆರ್.ಗಿರಿಯಾಲ
Published : 19 ಅಕ್ಟೋಬರ್ 2025, 6:54 IST
Last Updated : 19 ಅಕ್ಟೋಬರ್ 2025, 6:54 IST
ಫಾಲೋ ಮಾಡಿ
Comments
ಧಾರವಾಡದ ಮಾರುಕಟ್ಟೆಯಲ್ಲಿ ಗ್ರಾಹಕರು ಮಣ್ಣಿನ ಹಣತೆಗಳನ್ನು ಖರೀದಿಸಿದರು
ಧಾರವಾಡದ ಮಾರುಕಟ್ಟೆಯಲ್ಲಿ ಗ್ರಾಹಕರು ಮಣ್ಣಿನ ಹಣತೆಗಳನ್ನು ಖರೀದಿಸಿದರು
ಹಲವು ವರ್ಷಗಳಿಂದ ಮಣ್ಣಿನ ಹಣತೆಗಳ ಮಾರಾಟ ಮಾಡುತ್ತಿದ್ದೇನೆ. ತಮಿಳುನಾಡಿನ ಸಣ್ಣ ಗಾತ್ರದ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಾಳೆ ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಇದೆ.
– ಮಹಾದೇವಪ್ಪ ಕುಂಬಾರ, ಹೆಬ್ಬಳ್ಳಿ
ಈ ಬಾರಿ ಮಣ್ಣಿನ ಹಣತೆಗಳನ್ನು ಬೆಳಗಿಸಿ ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಕೈಯಲ್ಲಿ ತಯಾರಿಸಿರುವ ಹಣತೆಗಿಂತ ಯಂತ್ರದಲ್ಲಿ ಅಚ್ಚಾಗಿರುವ ಹಣತೆಗಳು ಆಕರ್ಷಕವಾಗಿವೆ.
– ಸವಿತಾ ಪಾಟೀಲ, ಸ್ಥಳೀಯ ಗ್ರಾಹಕಿ
ಕುಂಬಾರರ ಕಸುಬಿಗೆ ಹೊಡೆತ
ದೀಪಾವಳಿ ಹಬ್ಬದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತವೆ. ಕುಂಬಾರ ಸಮುದಾಯಕ್ಕೆ ವರ್ಷದ ಅತಿ ದೊಡ್ಡ ವ್ಯಾಪಾರದ ಸಮಯ. ಎರಡು ತಿಂಗಳು ಮುಂಚೆಯೇ ಹಿರಿಯರಿಂದ ಮಕ್ಕಳವರೆಗೆ ಇಡೀ ಕುಟುಂಬವು ಜೇಡಿಮಣ್ಣಿನಿಂದ ವಿವಿಧ ಆಕಾರದ ಹಣತೆಗಳನ್ನು ತಯಾರಿಸಿ ಸುಟ್ಟು ಬಣ್ಣ ಹಾಕಿ ಹಣತೆಗಳನ್ನು ಮಾರುಕಟ್ಟೆಗೆ ತರುತ್ತಾರೆ. ‘ಹಲವು ವರ್ಷಗಳಿಂದ ಮಣ್ಣಿನ ಹಣತೆಗಳಿಗೆ ದೊಡ್ಡ ಪೈಪೋಟಿ ಎದುರಾಗಿದ್ದು. ಪಿಒಪಿ ಹಣತೆಗಳು ಚಿತ್ತಾಕರ್ಷಕ ಪ್ಲಾಸ್ಟಿಕ್ ಹಣತೆಗಳು ಲಗ್ಗೆ ಇಟ್ಟಿರುವುದು ಕುಂಬಾರರ ಕಸುಬಿಗೆ ಹೊಡೆತ ಬಿದ್ದಿದೆ’ ಎಂದು ಕುಂಬಾರರು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT