<p><strong>ಧಾರವಾಡ:</strong> ‘ಸೃಜನಾ ರಂಗಮಂದಿರದಲ್ಲಿ ಏಪ್ರಿಲ್ 21ರಿಂದ ಮೇ 11ರವರೆಗೆ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ ಸಂಸ್ಕೃತಿ ಶಿಬಿರ ನಡೆಯಲಿದೆ’ ಎಂದು ರಂಗಕರ್ಮಿ ಪ್ರಕಾಶ ಗರುಡ ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರಿ ಬಾಳಾಚಾರ್ಯ ಟ್ರಸ್ಟ್, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಹಾಗೂ ಗೊಂಬೆಮನೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. 21ರಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟನೆ ನೆರವೇರಿಸುವರು’ ಎಂದು ತಿಳಿಸಿದರು.</p>.<p>‘ಕನ್ನಡ ಭಾಷೆ- ಸಂಸ್ಕೃತಿ ಉಳಿಸಲು ‘ಮಾತೃ ಭಾಷೆಯಿಂದ ಮನೋವಿಕಾಸ’ ಎಂಬ ಧ್ಯೇಯದೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರಗೆ ಶಿಬಿರ ಜರುಗಲಿದೆ. 10ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು’ ಎಂದರು.</p>.<p>‘ರಂಗಭೂಮಿ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಸೊಗಡು, ಸೊಗಸು, ಸತ್ವ, ಸಂಸ್ಕೃತಿ ಜೊತೆಗೆ ಮಾತೃಭಾಷಾ ವೈವಿಧ್ಯತೆ ಕುರಿತು ತಿಳಿಸುವುದು ಶಿಬಿರದ ಉದ್ದೇಶ. ಶಿಬಿರದಲ್ಲಿ ಕಥೆ-ಕಾವ್ಯ ಹೇಳುವುದು, ಅವುಗಳ ಚಿತ್ರ ಬಿಡಿಸುವುದು, ರಂಗಾಟ, ಕೋಲಾಟ, ಸಾಹಿತಿಗಳ ಸಾಕ್ಷಚಿತ್ರಗಳ ಪರಿಚಯಿಸಲಾಗುವುದು’ ಎಂದು ಹೇಳಿದರು.</p>.<p>‘ಶಿಬಿರದ ಕೊನೆಗೆ ಮಕ್ಕಳಿಂದ ಕನ್ನಡ ಕಾವ್ಯ-ಪದ್ಯಗಳ ವಾಚನ, ಗಾಯನ, ಅಭಿನಯದಿಂದ ಕನ್ನಡ ಕಾವ್ಯ-ಕಥಾ ರಂಗ ಪ್ರಯೋಗ ಜರುಗಲಿದೆ. 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಮಾಹಿತಿಗೆ ಮೊ:93431 00135 ಸಂಪರ್ಕಿಸಬಹುದು’ ಎಂದರು.</p>.<p>ಕೃಷ್ಣ ಕಟ್ಟಿ, ಹನುಮೇಶ ಸಕ್ಕರಿ, ಶಶಿಧರ ನರೇಂದ್ರ, ಸಮೀರ ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಸೃಜನಾ ರಂಗಮಂದಿರದಲ್ಲಿ ಏಪ್ರಿಲ್ 21ರಿಂದ ಮೇ 11ರವರೆಗೆ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ ಸಂಸ್ಕೃತಿ ಶಿಬಿರ ನಡೆಯಲಿದೆ’ ಎಂದು ರಂಗಕರ್ಮಿ ಪ್ರಕಾಶ ಗರುಡ ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರಿ ಬಾಳಾಚಾರ್ಯ ಟ್ರಸ್ಟ್, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಹಾಗೂ ಗೊಂಬೆಮನೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. 21ರಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟನೆ ನೆರವೇರಿಸುವರು’ ಎಂದು ತಿಳಿಸಿದರು.</p>.<p>‘ಕನ್ನಡ ಭಾಷೆ- ಸಂಸ್ಕೃತಿ ಉಳಿಸಲು ‘ಮಾತೃ ಭಾಷೆಯಿಂದ ಮನೋವಿಕಾಸ’ ಎಂಬ ಧ್ಯೇಯದೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರಗೆ ಶಿಬಿರ ಜರುಗಲಿದೆ. 10ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು’ ಎಂದರು.</p>.<p>‘ರಂಗಭೂಮಿ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಸೊಗಡು, ಸೊಗಸು, ಸತ್ವ, ಸಂಸ್ಕೃತಿ ಜೊತೆಗೆ ಮಾತೃಭಾಷಾ ವೈವಿಧ್ಯತೆ ಕುರಿತು ತಿಳಿಸುವುದು ಶಿಬಿರದ ಉದ್ದೇಶ. ಶಿಬಿರದಲ್ಲಿ ಕಥೆ-ಕಾವ್ಯ ಹೇಳುವುದು, ಅವುಗಳ ಚಿತ್ರ ಬಿಡಿಸುವುದು, ರಂಗಾಟ, ಕೋಲಾಟ, ಸಾಹಿತಿಗಳ ಸಾಕ್ಷಚಿತ್ರಗಳ ಪರಿಚಯಿಸಲಾಗುವುದು’ ಎಂದು ಹೇಳಿದರು.</p>.<p>‘ಶಿಬಿರದ ಕೊನೆಗೆ ಮಕ್ಕಳಿಂದ ಕನ್ನಡ ಕಾವ್ಯ-ಪದ್ಯಗಳ ವಾಚನ, ಗಾಯನ, ಅಭಿನಯದಿಂದ ಕನ್ನಡ ಕಾವ್ಯ-ಕಥಾ ರಂಗ ಪ್ರಯೋಗ ಜರುಗಲಿದೆ. 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಮಾಹಿತಿಗೆ ಮೊ:93431 00135 ಸಂಪರ್ಕಿಸಬಹುದು’ ಎಂದರು.</p>.<p>ಕೃಷ್ಣ ಕಟ್ಟಿ, ಹನುಮೇಶ ಸಕ್ಕರಿ, ಶಶಿಧರ ನರೇಂದ್ರ, ಸಮೀರ ಜೋಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>