‘ನಾಟಕ ಪ್ರದರ್ಶನದಿಂದ ಬರುತ್ತಿದ್ದ ಆದಾಯ ಕುಸಿದಿದ್ದು, ನಮ್ಮ ಕಂಪನಿಯಲ್ಲಿರುವ 30 ಕಲಾವಿದರಿಗೆ ವೇತನ ನೀಡುವುದೇ ಕಷ್ಟವಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಬೇರೆ ಕಡೆಯಿಂದ ಹಣ ಹೊಂದಿಸುತ್ತಿದ್ದೇನೆ. ಲಾಕ್ಡೌನ್ನಿಂದ ತೊಂದರೆಗೀಡಾದ ಕಲಾವಿದರಿಗೆ ಸರ್ಕಾರದಿಂದ ಸರಿಯಾಗಿ ನೆರವು ಸಿಕ್ಕಿಲ್ಲ. ಬಡ ಕಲಾವಿದರು, ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ’ ಎಂದು ಹಾವೇರಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಖತಾಲ್ ಸಾಬ್ ರಾಜಾ ಸಾಬ್ ಬಣಕಾರ ಅಲವತ್ತುಕೊಂಡರು.