‘ಎಲ್ಲರನ್ನೂ ಒಳಗೊಳ್ಳುವುದಕ್ಕಾಗಿ ಪರಿಷತ್ನಲ್ಲಿ ಮಹಿಳಾ ಘಟಕ, ರೈತ ಹಾಗೂ ವಿದ್ಯಾರ್ಥಿ ಘಟಕಗಳನ್ನು ಆರಂಭಿಸಲಾಗುವುದು. ಸದಸ್ಯರಿಗೆ ಸ್ಮಾರ್ಟ್ ಗುರುತಿನ ಚೀಟಿ ವಿತರಣೆ, ಸಮ್ಮೇಳನಕ್ಕೆ ಬರುವ ವಾಹನಗಳಿಗೆ ಟೋಲ್ ಕೇಂದ್ರಗಳಲ್ಲಿ ಉಚಿತ ಪ್ರವೇಶ, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಹಾಗೂ ಕೇಂದ್ರ ಕಚೇರಿಯಲ್ಲಿ ಆಜೀವ ಸದಸ್ಯರಿಗೆ ರಿಫ್ರೇಶ್ಮೆಂಟ್ ವ್ಯವಸ್ಥೆ ಮಾಡಲಾಗುವುದು’ ಎಂದರು.