‘ವಿಶ್ವನಾಥ ಸಜ್ಜನರ್ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಚಿಕ್ಕಮ್ಮ ಮಲ್ಲಮ್ಮ ಸಜ್ಜನರ್ ಅವರ ಮಡಿಲಲ್ಲಿ ಬೆಳೆದ ಅವರು, ಶಿಸ್ತುಬದ್ಧ ಜೀವನ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಾಗಲೂ ಅವರಿಗೆ ಮನೆಯಿಂದ ತುಂಬು ಸಹಕಾರ ದೊರಕಿತ್ತು. ಕನ್ನಡ ನಾಡು ಮೆಚ್ಚುವ ಕೆಲಸ ಮಾಡಿ, ದೇಶದ ಹೆಮ್ಮೆಯ ಮಗನಾಗುತ್ತೇನೆ ಎಂದು ಹೇಳುತ್ತಿದ್ದರು’ ಎಂದು ಅಕ್ಕಪಕ್ಕದ ನಿವಾಸಿಗಳು ಹೆಮ್ಮೆಯಿಂದ ಹೇಳುತ್ತಾರೆ.