<p><strong>ಬೆಳಗಾವಿ</strong>: ‘ರಾಜ್ಯದಲ್ಲಿ ಹಿಂದೆ ದೈವಗಣ ಅಧಿಕಾರದಲ್ಲಿತ್ತು. ಈಗ ರಾಕ್ಷಸಗಣ ಇದೆ. ಈ ರಾಕ್ಷಸಗಣದ ನಾಯಕ ಡಿ.ಕೆ.ಶಿವಕುಮಾರ್, ಎರಡನೇಯದ್ದು ರಾಷ್ಟ್ರದ್ರೋಹಿ ಜಮೀರ್ ಅಹಮದ್, ಮೂರನೇಯದ್ದು ಡಾ.ಜಿ.ಪರಮೇಶ್ವರ, ನಾಲ್ಕನೇಯದ್ದು ಪ್ರಿಯಾಂಕ್ ಖರ್ಗೆ, ಐದನೇಯದ್ದು ಸುಳ್ಳಿನ ಸರದಾರ ಸಿದ್ದರಾಮಯ್ಯ. ಈ ಐದೂ ಗಣಗಳು ರಾಜ್ಯದ ಜನರಿಗೆ ಸಂಕಷ್ಟ ಕೊಡುತ್ತಿವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.</p>.<p>‘ಅಪ್ಪ– ಮಗ ವರ್ಗಾವಣೆಯಲ್ಲಿ ಅಪಾರ ಹಣ ತಿಂದರು. ಇಡೀ ರಾಜ್ಯದಲ್ಲಿ ದೊಡ್ಡ ಭ್ರಷ್ಟ ಈ ಸಿದ್ದರಾಮಯ್ಯ. ಜಾತಿಗಣತಿ ಶೀಘ್ರ ಜಾರಿ ತರುತ್ತೇನೆ ಎಂದು ಹೇಳುತ್ತಲೇ ಜಾತಿ– ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದರು. ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ನಾನು ಕಂಡಿರಲಿಲ್ಲ’ ಎಂದು ಅವರು ಹರಿಹಾಯ್ದರು.</p>.<p>‘ಜಮೀರ್ ಅಹಮದ್ ಹಿಂದೂಸ್ತಾನದಲ್ಲಿ ಹುಟ್ಟಿದ್ದಾರೋ? ಪಾಕಿಸ್ತಾನದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ನಾವು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನು ಕೂರಿಸಿದ್ದೇವೆ. ಎಲ್ಲ ಶಾಸಕರೂ ಮುಸ್ಲಿಮನಿಗೆ ಬಗ್ಗಿ ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಹೇಳಿಕೊಂಡಿದ್ದಾರೆ. ಇಂಥವರು ಹಿಂದೂಸ್ತಾನದಲ್ಲಿರಬೇಕೆ? ಪಾಕಿಸ್ತಾನದಲ್ಲಿರಬೇಕೆ ಎಂದು ಪ್ರಶ್ನಿಸಿದರು.</p>.<p>‘ಸುವರ್ಣ ವಿಧಾನಸೌಧದಲ್ಲಿನ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ಅಪ್ಪನಿಗೂ ಇದು ಸಾಧ್ಯವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ರಾಜ್ಯದಲ್ಲಿ ಹಿಂದೆ ದೈವಗಣ ಅಧಿಕಾರದಲ್ಲಿತ್ತು. ಈಗ ರಾಕ್ಷಸಗಣ ಇದೆ. ಈ ರಾಕ್ಷಸಗಣದ ನಾಯಕ ಡಿ.ಕೆ.ಶಿವಕುಮಾರ್, ಎರಡನೇಯದ್ದು ರಾಷ್ಟ್ರದ್ರೋಹಿ ಜಮೀರ್ ಅಹಮದ್, ಮೂರನೇಯದ್ದು ಡಾ.ಜಿ.ಪರಮೇಶ್ವರ, ನಾಲ್ಕನೇಯದ್ದು ಪ್ರಿಯಾಂಕ್ ಖರ್ಗೆ, ಐದನೇಯದ್ದು ಸುಳ್ಳಿನ ಸರದಾರ ಸಿದ್ದರಾಮಯ್ಯ. ಈ ಐದೂ ಗಣಗಳು ರಾಜ್ಯದ ಜನರಿಗೆ ಸಂಕಷ್ಟ ಕೊಡುತ್ತಿವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.</p>.<p>‘ಅಪ್ಪ– ಮಗ ವರ್ಗಾವಣೆಯಲ್ಲಿ ಅಪಾರ ಹಣ ತಿಂದರು. ಇಡೀ ರಾಜ್ಯದಲ್ಲಿ ದೊಡ್ಡ ಭ್ರಷ್ಟ ಈ ಸಿದ್ದರಾಮಯ್ಯ. ಜಾತಿಗಣತಿ ಶೀಘ್ರ ಜಾರಿ ತರುತ್ತೇನೆ ಎಂದು ಹೇಳುತ್ತಲೇ ಜಾತಿ– ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದರು. ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ನಾನು ಕಂಡಿರಲಿಲ್ಲ’ ಎಂದು ಅವರು ಹರಿಹಾಯ್ದರು.</p>.<p>‘ಜಮೀರ್ ಅಹಮದ್ ಹಿಂದೂಸ್ತಾನದಲ್ಲಿ ಹುಟ್ಟಿದ್ದಾರೋ? ಪಾಕಿಸ್ತಾನದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ನಾವು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನು ಕೂರಿಸಿದ್ದೇವೆ. ಎಲ್ಲ ಶಾಸಕರೂ ಮುಸ್ಲಿಮನಿಗೆ ಬಗ್ಗಿ ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಹೇಳಿಕೊಂಡಿದ್ದಾರೆ. ಇಂಥವರು ಹಿಂದೂಸ್ತಾನದಲ್ಲಿರಬೇಕೆ? ಪಾಕಿಸ್ತಾನದಲ್ಲಿರಬೇಕೆ ಎಂದು ಪ್ರಶ್ನಿಸಿದರು.</p>.<p>‘ಸುವರ್ಣ ವಿಧಾನಸೌಧದಲ್ಲಿನ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ಅಪ್ಪನಿಗೂ ಇದು ಸಾಧ್ಯವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>