<p><strong>ಹುಬ್ಬಳ್ಳಿ</strong>: ಇಲ್ಲಿನ ನವ ಆನಂದ ನಗರದಲ್ಲಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.</p>.<p>ಅಂಜುಮಾ (33) ಕೊಲೆಯಾದವರು. ಆರೋಪಿ ಮೆಹಬೂಬ್ (36) ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಮೊದಲ ಪತಿ ಮೃತಪಟ್ಟಿದ್ದರಿಂದ ಎರಡು ಮಕ್ಕಳೊಂದಿಗೆ ವಾಸವಿದ್ದ ಅಂಜುಮಾ ಅವರನ್ನು, ಮೊದಲ ಪತ್ನಿಯನ್ನು ತೊರೆದಿದ್ದ ಮೆಹಬೂಬ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಅವರು ನವ ಆನಂದ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರ ಮಧ್ಯೆ ಜಗಳ ನಡೆದು, ಈ ವೇಳೆ ಮೆಹಬೂಬ್, ಅಂಜುಮಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><span class="bold"><strong>ರೈಲು ನಿಲ್ದಾಣದಲ್ಲಿ ಕಳವು:</strong></span> ಬೆಳಗಾವಿಗೆ ತೆರಳಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಲಗಿದ್ದ ರಾಯಬಾಗದ ಸುಪ್ರಿತ್ ಕಾಂಬಳೆ ಅವರ ಚಿನ್ನಾಭರಣ, ಮೊಬೈಲ್, ಬಟ್ಟೆ ಸೇರಿ ₹1.10 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳವಾಗಿದ್ದು, ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಲ್ಯಾಪ್ಟಾಪ್ ಕಳವು:</strong></span> ಜೋಧಪುರ ಎಕ್ಸ್ಪ್ರೆಸ್ (16508) ರೈಲಿನಲ್ಲಿ ಬೆಂಗಳೂರಿನಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಪುಣೆಯ ನಚಿಕೇತ ಸೇನ್ ಅವರ ₹2.30 ಲಕ್ಷ ಮೌಲ್ಯದ ಎರಡು ಲ್ಯಾಪ್ಟಾಪ್ ಕಳವಾದ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>₹5 ಲಕ್ಷ ವಂಚನೆ:</strong></span> ನಗರದ ಪ್ರವೀಣಕುಮಾರ ಮಾವಿನಕಾಯಿ ಅವರ ಮೊಬೈಲ್ಗೆ ಅಪರಿಚಿತರು ಎಸ್ಬಿಐ ಯೋನೊ ಆ್ಯಪ್ನ ಎಪಿಕೆ ಫೈಲ್ ಕಳುಹಿಸಿ ₹5.44 ಲಕ್ಷ ವಂಚಿಸಿದ್ದಾರೆ.</p>.<p>ಎಪಿಕೆ ಫೈಲ್ ಲಿಂಕ್ ಅನ್ನು ಪ್ರವೀಣಕುಮಾರ್ ಒತ್ತಿದಾಗ, ಮೊಬೈಲ್ ಹ್ಯಾಕ್ ಮಾಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಹಣ ಪಡೆದು ಮೋಸ: </strong></span>ವ್ಯಕ್ತಿಯೊಬ್ಬ ಸಾಲದ ಕಂತು ಮರುಪಾವತಿ ಮಾಡುವುದಾಗಿ ಎಂಟು ಜನರಿಂದ ₹3.19 ಲಕ್ಷ ಪಡೆದು, ಕಂತು ತುಂಬದೆ ವಂಚಿಸಿದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ನಗರದ ಅಶೋಕ ಗೋನಾಳ ಎಂಬಾತ, ಚೇತನ ಸುಡಗಾಡೆ, ಈರಪ್ಪ ಮುನವಳ್ಳಿ, ಯಲ್ಲಪ್ಪ ಪಾಟೀಲ, ರಾಹುಲ್ ಜೊಮಾನೆ, ಸಾಗರ ಕಿಲ್ಲೇಕರ, ರಾಕೇಶಕುಮಾರ ಲಮಾಣಿ, ರೋಜ ಮುಜಾವರ, ಅತೀಶ ತಹಶೀಲ್ದಾರ್ ಎಂಬುವರಿಗೆ ವಂಚಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><span class="bold"><strong>ವಂಚನೆ:</strong></span> ಲೈಫ್ ಇನ್ಶೂರೆನ್ಸ್ ಪಾಲಿಸಿ ಹಣ ತುಂಬುವುದಾಗಿ ಗ್ರಾಹಕರೊಬ್ಬರಿಂದ ₹2.14 ಲಕ್ಷ ಪಡೆದು ಹಣ ಪಾವತಿಸದೆ ಸುಜಿತಕುಮಾರ್ ಎಂಬಾತ ವಂಚಿಸಿದ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಆಭರಣ, ವಾಹನ ಕಳವು:</strong></span> ಹಳೇ ಹುಬ್ಬಳ್ಳಿಯ ಭಾರತಿ ನಗರದ ನಿವಾಸಿ ಆನಂದ ಜೋಶಿ ಅವರ ಮನೆಯಲ್ಲಿದ್ದ ₹1.48 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಆನಂದ ಅವರು ಕುಟುಂಬ ಸಮೇತ ಬೆಂಗಳೂರಿಗೆ ಹೋದಾಗ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಆಭರಣ, ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಇಲ್ಲಿನ ನವ ಆನಂದ ನಗರದಲ್ಲಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.</p>.<p>ಅಂಜುಮಾ (33) ಕೊಲೆಯಾದವರು. ಆರೋಪಿ ಮೆಹಬೂಬ್ (36) ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಮೊದಲ ಪತಿ ಮೃತಪಟ್ಟಿದ್ದರಿಂದ ಎರಡು ಮಕ್ಕಳೊಂದಿಗೆ ವಾಸವಿದ್ದ ಅಂಜುಮಾ ಅವರನ್ನು, ಮೊದಲ ಪತ್ನಿಯನ್ನು ತೊರೆದಿದ್ದ ಮೆಹಬೂಬ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಅವರು ನವ ಆನಂದ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರ ಮಧ್ಯೆ ಜಗಳ ನಡೆದು, ಈ ವೇಳೆ ಮೆಹಬೂಬ್, ಅಂಜುಮಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><span class="bold"><strong>ರೈಲು ನಿಲ್ದಾಣದಲ್ಲಿ ಕಳವು:</strong></span> ಬೆಳಗಾವಿಗೆ ತೆರಳಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಲಗಿದ್ದ ರಾಯಬಾಗದ ಸುಪ್ರಿತ್ ಕಾಂಬಳೆ ಅವರ ಚಿನ್ನಾಭರಣ, ಮೊಬೈಲ್, ಬಟ್ಟೆ ಸೇರಿ ₹1.10 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳವಾಗಿದ್ದು, ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಲ್ಯಾಪ್ಟಾಪ್ ಕಳವು:</strong></span> ಜೋಧಪುರ ಎಕ್ಸ್ಪ್ರೆಸ್ (16508) ರೈಲಿನಲ್ಲಿ ಬೆಂಗಳೂರಿನಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಪುಣೆಯ ನಚಿಕೇತ ಸೇನ್ ಅವರ ₹2.30 ಲಕ್ಷ ಮೌಲ್ಯದ ಎರಡು ಲ್ಯಾಪ್ಟಾಪ್ ಕಳವಾದ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>₹5 ಲಕ್ಷ ವಂಚನೆ:</strong></span> ನಗರದ ಪ್ರವೀಣಕುಮಾರ ಮಾವಿನಕಾಯಿ ಅವರ ಮೊಬೈಲ್ಗೆ ಅಪರಿಚಿತರು ಎಸ್ಬಿಐ ಯೋನೊ ಆ್ಯಪ್ನ ಎಪಿಕೆ ಫೈಲ್ ಕಳುಹಿಸಿ ₹5.44 ಲಕ್ಷ ವಂಚಿಸಿದ್ದಾರೆ.</p>.<p>ಎಪಿಕೆ ಫೈಲ್ ಲಿಂಕ್ ಅನ್ನು ಪ್ರವೀಣಕುಮಾರ್ ಒತ್ತಿದಾಗ, ಮೊಬೈಲ್ ಹ್ಯಾಕ್ ಮಾಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಹಣ ಪಡೆದು ಮೋಸ: </strong></span>ವ್ಯಕ್ತಿಯೊಬ್ಬ ಸಾಲದ ಕಂತು ಮರುಪಾವತಿ ಮಾಡುವುದಾಗಿ ಎಂಟು ಜನರಿಂದ ₹3.19 ಲಕ್ಷ ಪಡೆದು, ಕಂತು ತುಂಬದೆ ವಂಚಿಸಿದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ನಗರದ ಅಶೋಕ ಗೋನಾಳ ಎಂಬಾತ, ಚೇತನ ಸುಡಗಾಡೆ, ಈರಪ್ಪ ಮುನವಳ್ಳಿ, ಯಲ್ಲಪ್ಪ ಪಾಟೀಲ, ರಾಹುಲ್ ಜೊಮಾನೆ, ಸಾಗರ ಕಿಲ್ಲೇಕರ, ರಾಕೇಶಕುಮಾರ ಲಮಾಣಿ, ರೋಜ ಮುಜಾವರ, ಅತೀಶ ತಹಶೀಲ್ದಾರ್ ಎಂಬುವರಿಗೆ ವಂಚಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><span class="bold"><strong>ವಂಚನೆ:</strong></span> ಲೈಫ್ ಇನ್ಶೂರೆನ್ಸ್ ಪಾಲಿಸಿ ಹಣ ತುಂಬುವುದಾಗಿ ಗ್ರಾಹಕರೊಬ್ಬರಿಂದ ₹2.14 ಲಕ್ಷ ಪಡೆದು ಹಣ ಪಾವತಿಸದೆ ಸುಜಿತಕುಮಾರ್ ಎಂಬಾತ ವಂಚಿಸಿದ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><span class="bold"><strong>ಆಭರಣ, ವಾಹನ ಕಳವು:</strong></span> ಹಳೇ ಹುಬ್ಬಳ್ಳಿಯ ಭಾರತಿ ನಗರದ ನಿವಾಸಿ ಆನಂದ ಜೋಶಿ ಅವರ ಮನೆಯಲ್ಲಿದ್ದ ₹1.48 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಆನಂದ ಅವರು ಕುಟುಂಬ ಸಮೇತ ಬೆಂಗಳೂರಿಗೆ ಹೋದಾಗ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಆಭರಣ, ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>