ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ಪ್ರಗತಿಪರ ರೈತ ಮೃತ್ಯುಂಜಯ ನಿಂಗಪ್ಪ ನಾಗಶೆಟ್ಟಿ, ನರೇಗಾ ಸಹಾಯಧನ ಸಿಗದ ಸಂತ್ರಸ್ತ. ಮೃತ್ಯುಂಜಯ ಅವರದು ಪ್ರಗತಿಪರ ರೈತರ ಕುಟುಂಬ. ಅವರ ಬೇಸಾಯ ಮೆಚ್ಚಿ ಕೃಷಿ ಇಲಾಖೆಯಿಂದ ‘ಧಾರವಾಡ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ’, ಕೃಷಿ ವಿ.ವಿ.ಯಿಂದ ‘ಶ್ರೇಷ್ಠ ಕೃಷಿಕರಲ್ಲಿ ಶ್ರೇಷ್ಠ’, ’ಶ್ರೇಷ್ಠ ಯುವ ಕೃಷಿಕ’, ‘ಕೃಷಿಯ ಋಷಿ’ ಪ್ರಶಸ್ತಿಗಳು ಸಿಕ್ಕಿವೆ.