<p><strong>ಹುಬ್ಬಳ್ಳಿ</strong>: ಇಲ್ಲಿಯ ಕೇಶ್ವಾಪುರದ ವೈದ್ಯ ಕೃಷ್ಣ ಅವರಿಗೆ ವಾಟ್ಸ್ಆ್ಯಪ್ ಗ್ರೂಪ್ ಸೇರ್ಪಡೆಯಾಗಲು ಸಂದೇಶ ಕಳುಹಿಸಿದ ವ್ಯಕ್ತಿ, ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿ ₹53.45 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹77.70 ಲಕ್ಷ ವಂಚನೆ:</strong> ಇಲ್ಲಿಯ ಅಕ್ಷಯ ಕಾಲೊನಿಯ ಸುಧೀರ ರಾಯ್ಕರ್ ಅವರಿಗೆ ವಾಟ್ಸ್ಆ್ಯಪ್ ನಂಬರ್ನಿಂದ ಕರೆ ಮಾಡಿದ ಮಹಿಳೆ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ ₹77.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಕೋಕಿನ್ ಮಾರಾಟ, ಬಂಧನ: </strong>ಮಾದಕ ವಸ್ತು ಕೋಕಿನ್ ಮಾರಾಟಕ್ಕೆ ಯತ್ನಿಸಿದ ಇಲ್ಲಿಯ ವೀರಾಪುರ ಓಣಿಯ ಮೊಹ್ಮದಜುನೈದ್ ಎಂಬಾತನ್ನು ಬಂಧಿಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು, ₹37 ಸಾವಿರ ವೌಲ್ಯದ 2.51 ಗ್ರಾಂ ಕೋಕಿನ್ ಸೇರಿದಂತೆ ₹62 ಸಾವಿರ ವೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.</p>.<p><strong>ಕಿರುಕುಳ, ಪ್ರಕರಣ ದಾಖಲು:</strong> ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಬೆಳಗಾವಿಯ ಜಮೀಲ್ ಕಂದಗಲ್ ಅವರನ್ನು ನಗರದ ಲಾಡ್ಜ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಸೀಂ, ಮೋಯಿನ್, ಶಾನವಾಜ್ ಸೌದಾಗರ, ಮಲ್ಲಿಕ್, ಪ್ರಶಾಂತ ಸೇರಿ ಇತರರು ಜಮೀಲ್ ಅವರನ್ನು ಬೆಳಗಾವಿಯಿಂದ ಕರೆದುಕೊಂಡು ಬಂದು, ₹15 ಲಕ್ಷ ನೀಡುವಂತೆ ಲಾಡ್ಜ್ನ ರೂಮ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಇಲ್ಲಿಯ ಕೇಶ್ವಾಪುರದ ವೈದ್ಯ ಕೃಷ್ಣ ಅವರಿಗೆ ವಾಟ್ಸ್ಆ್ಯಪ್ ಗ್ರೂಪ್ ಸೇರ್ಪಡೆಯಾಗಲು ಸಂದೇಶ ಕಳುಹಿಸಿದ ವ್ಯಕ್ತಿ, ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿ ₹53.45 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹77.70 ಲಕ್ಷ ವಂಚನೆ:</strong> ಇಲ್ಲಿಯ ಅಕ್ಷಯ ಕಾಲೊನಿಯ ಸುಧೀರ ರಾಯ್ಕರ್ ಅವರಿಗೆ ವಾಟ್ಸ್ಆ್ಯಪ್ ನಂಬರ್ನಿಂದ ಕರೆ ಮಾಡಿದ ಮಹಿಳೆ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ ₹77.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಕೋಕಿನ್ ಮಾರಾಟ, ಬಂಧನ: </strong>ಮಾದಕ ವಸ್ತು ಕೋಕಿನ್ ಮಾರಾಟಕ್ಕೆ ಯತ್ನಿಸಿದ ಇಲ್ಲಿಯ ವೀರಾಪುರ ಓಣಿಯ ಮೊಹ್ಮದಜುನೈದ್ ಎಂಬಾತನ್ನು ಬಂಧಿಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು, ₹37 ಸಾವಿರ ವೌಲ್ಯದ 2.51 ಗ್ರಾಂ ಕೋಕಿನ್ ಸೇರಿದಂತೆ ₹62 ಸಾವಿರ ವೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.</p>.<p><strong>ಕಿರುಕುಳ, ಪ್ರಕರಣ ದಾಖಲು:</strong> ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಬೆಳಗಾವಿಯ ಜಮೀಲ್ ಕಂದಗಲ್ ಅವರನ್ನು ನಗರದ ಲಾಡ್ಜ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಸೀಂ, ಮೋಯಿನ್, ಶಾನವಾಜ್ ಸೌದಾಗರ, ಮಲ್ಲಿಕ್, ಪ್ರಶಾಂತ ಸೇರಿ ಇತರರು ಜಮೀಲ್ ಅವರನ್ನು ಬೆಳಗಾವಿಯಿಂದ ಕರೆದುಕೊಂಡು ಬಂದು, ₹15 ಲಕ್ಷ ನೀಡುವಂತೆ ಲಾಡ್ಜ್ನ ರೂಮ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>