<p><strong>ಹುಬ್ಬಳ್ಳಿ</strong>: ಇಲ್ಲಿನ ಉಣಕಲ್ನ ಧರ್ಮಪುರಿ ಬಡಾವಣೆಯ ಲೇಕ್ವ್ಯೂವ್ ಅಪಾರ್ಟ್ಮೆಂಟ್ನ ವೀಣಾ ಉಣಕಲ್ ಅವರ ಮನೆ ಬಾಗಿಲಿನ ಬೀಗ ಮುರಿದು, ₹1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕುಸುಗಲ್ ರಸ್ತೆ ಪಾರಸವಾಡಿ ಕಂದಕೂರು ಕಾಲೊನಿಯ ವ್ಯಾಪಾರಿ ಪ್ರಣೀತ ಉಪ್ಪಿನ ಅವರ ಮನೆ ಬಾಗಿಲಿನ ಬೀಗ ಮುರಿದು, ₹2.38 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ, 1,029 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಸರ ಕಳವು:</strong> ನಗರದ ಹೊಸೂರು ಕ್ರಾಸ್ನಲ್ಲಿ ನವನಗರಕ್ಕೆ ತೆರಳಲೆಂದು ಗಾಮನಗಟ್ಟಿ ಬಸ್ ಹತ್ತಿದ್ದ ರಾಮಲಿಂಗೇಶ್ವರ ನಗರದ ಅರ್ಪಿತಾ ಅವರ ಕೊರಳಲ್ಲಿದ್ದ ₹50ಸಾವಿರ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಇ-ಮೇಲ್ ಐಡಿ ಅಪ್ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿದ ವ್ಯಕ್ತಿಯೊಬ್ಬ, ಇಲ್ಲಿನ ಗದಗ ರಸ್ತೆಯ ನೆಹರೂ ನಗರದ ಅಲ್ಪಾ ರಾಮೋಜಿ ಅವರ ಯುಪಿಐ ಹ್ಯಾಕ್ ಮಾಡಿ ಆನ್ಲೈನ್ ಮೂಲಕ ₹94 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.</p>.<p>ಅಲ್ಪಾ ರಾಮೋಜಿ ಅವರು ಇ-ಮೇಲ್ ಐಡಿ ಅಪ್ಡೇಟ್ ಮಾಡಲು ಯತ್ನಿಸಿದಾಗ, ವಂಚಕನು ಅವರ ಮೊಬೈಲ್ ನಂಬರ್ಗೆ ಲಿಂಕ್ ಕಳುಹಿಸಿ ಡೆಬಿಟ್ ಕಾರ್ಡ್ ವಿವರ ಪಡೆದಿದ್ದಾನೆ. ಒಟಿಪಿ ಬಾರದಿದ್ದರೂ ಟ್ರೇಡಿಂಗ್ ಕಂಪನಿ ಹೆಸರಲ್ಲಿರುವ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವ್ಯಕ್ತಿ ಆತ್ಮಹತ್ಯೆ:</strong> ಉದ್ಯಮದಲ್ಲಿ ನಷ್ಟವಾಗಿದ್ದಕ್ಕೆ ಮನನೊಂದು ನಗರದ ನಿವಾಸಿ ದತ್ತಾತ್ರೇಯ ವಾಗಲೆ(42) ಮರಾಠಗಲ್ಲಿಯ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ದತ್ತಾತ್ರೇಯ ಅವರು ಮಂಗಳವಾರ ಬೆಳಿಗ್ಗೆ 8.30ರ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮೃತ ದೇಹವನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಇಲ್ಲಿನ ಉಣಕಲ್ನ ಧರ್ಮಪುರಿ ಬಡಾವಣೆಯ ಲೇಕ್ವ್ಯೂವ್ ಅಪಾರ್ಟ್ಮೆಂಟ್ನ ವೀಣಾ ಉಣಕಲ್ ಅವರ ಮನೆ ಬಾಗಿಲಿನ ಬೀಗ ಮುರಿದು, ₹1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕುಸುಗಲ್ ರಸ್ತೆ ಪಾರಸವಾಡಿ ಕಂದಕೂರು ಕಾಲೊನಿಯ ವ್ಯಾಪಾರಿ ಪ್ರಣೀತ ಉಪ್ಪಿನ ಅವರ ಮನೆ ಬಾಗಿಲಿನ ಬೀಗ ಮುರಿದು, ₹2.38 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ, 1,029 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಮಾಡಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಸರ ಕಳವು:</strong> ನಗರದ ಹೊಸೂರು ಕ್ರಾಸ್ನಲ್ಲಿ ನವನಗರಕ್ಕೆ ತೆರಳಲೆಂದು ಗಾಮನಗಟ್ಟಿ ಬಸ್ ಹತ್ತಿದ್ದ ರಾಮಲಿಂಗೇಶ್ವರ ನಗರದ ಅರ್ಪಿತಾ ಅವರ ಕೊರಳಲ್ಲಿದ್ದ ₹50ಸಾವಿರ ಮೌಲ್ಯದ ಚಿನ್ನದ ಸರ ಕಳವು ಮಾಡಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಇ-ಮೇಲ್ ಐಡಿ ಅಪ್ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿದ ವ್ಯಕ್ತಿಯೊಬ್ಬ, ಇಲ್ಲಿನ ಗದಗ ರಸ್ತೆಯ ನೆಹರೂ ನಗರದ ಅಲ್ಪಾ ರಾಮೋಜಿ ಅವರ ಯುಪಿಐ ಹ್ಯಾಕ್ ಮಾಡಿ ಆನ್ಲೈನ್ ಮೂಲಕ ₹94 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.</p>.<p>ಅಲ್ಪಾ ರಾಮೋಜಿ ಅವರು ಇ-ಮೇಲ್ ಐಡಿ ಅಪ್ಡೇಟ್ ಮಾಡಲು ಯತ್ನಿಸಿದಾಗ, ವಂಚಕನು ಅವರ ಮೊಬೈಲ್ ನಂಬರ್ಗೆ ಲಿಂಕ್ ಕಳುಹಿಸಿ ಡೆಬಿಟ್ ಕಾರ್ಡ್ ವಿವರ ಪಡೆದಿದ್ದಾನೆ. ಒಟಿಪಿ ಬಾರದಿದ್ದರೂ ಟ್ರೇಡಿಂಗ್ ಕಂಪನಿ ಹೆಸರಲ್ಲಿರುವ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವ್ಯಕ್ತಿ ಆತ್ಮಹತ್ಯೆ:</strong> ಉದ್ಯಮದಲ್ಲಿ ನಷ್ಟವಾಗಿದ್ದಕ್ಕೆ ಮನನೊಂದು ನಗರದ ನಿವಾಸಿ ದತ್ತಾತ್ರೇಯ ವಾಗಲೆ(42) ಮರಾಠಗಲ್ಲಿಯ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ದತ್ತಾತ್ರೇಯ ಅವರು ಮಂಗಳವಾರ ಬೆಳಿಗ್ಗೆ 8.30ರ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಮೃತ ದೇಹವನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>