2019ರ ಪ್ರಶಸ್ತಿಯು ಬೆಂಗಳೂರಿನ ಪಿ. ಚಂದ್ರಿಕಾ ಅವರ ನಾಟಕ ‘ಮೋದಾಳಿ’, 2020ರ ಪ್ರಶಸ್ತಿಯು ಮೈಸೂರಿನ ಜಯಶ್ರೀ ಹೆಗಡೆ ಅವರ ಪ್ರಬಂಧ ಸಂಕಲನ
‘ಇಣುಕಿದಲ್ಲಿ ಛಂದ’ ಕೃತಿಗೆ ಹಾಗೂ 2021ರ ಪ್ರಶಸ್ತಿಯು ಮಂಗಳೂರಿನ ಬಿ.ಎಂ.ರೋಹಿಣಿ ಅವರ ಆತ್ಮಕತೆ ‘ನಾಗಂದಿಗೆಯೊಳಗಿಂದ’ ಕೃತಿಗೆ ದೊರೆತಿದೆ. ಪ್ರಶಸ್ತಿಯು ತಲಾ ₹10 ಸಾವಿರ, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಧಾರವಾಡದಲ್ಲಿ ಜೂನ್ 18ರ ಸಂಜೆ ನಡೆಯುವ ಸಮಾರಂಭದಲ್ಲಿ ಪ್ರತಿಷ್ಠಾನದ ಡಾ.ಸುಧಾಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಪ್ರಕಟಣೆ ತಿಳಿಸಿದೆ.