ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಇಲ್ಲಿನ ರೈಲು ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮಿ ಹೆಸರು ಇಡಲಾಗಿದೆ. ಆದರೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಛತ್ತು ಹಾಕಿ ವಿವೇಕಾನಂದರ ಮೂರ್ತಿ ಸ್ಥಾಪಿಸಿ, ಸಿದ್ಧಾರೂಢರ ಸಣ್ಣ ಮೂರ್ತಿಯನ್ನಷ್ಟೇ ಪ್ರತಿಷ್ಠಾಪಿಸಲಾಗಿದೆ. ಇದು ಹುಬ್ಬಳ್ಳಿ ಜನರ ಸ್ವಾಭಿಮಾನಕ್ಕೆ, ನಂಬಿಕೆ ಮತ್ತು ಅಸ್ಮಿತೆಗೆ ಧಕ್ಕೆ ತರುತ್ತಿದೆ. ಆದ್ದರಿಂದ ವಿವೇಕಾನಂದ ಮೂರ್ತಿ ತೆರವು ಮಾಡಿ, ನಿಲ್ದಾಣದ ಸ್ವಾಗತ ದ್ವಾರದ ಬಳಿ ಸಿದ್ಧಾರೂಢರ ದೊಡ್ಡ ಮೂರ್ತಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.