ಧಾರವಾಡ: ಸತ್ತೂರಿನ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜು ಬಳಿ ಜೆಡಿಎಸ್ ಮುಖಂಡಶ್ರೀಕಾಂತ ಜಮನಾಳ ಮಹಿಳೆಯ ಕೈ ಹಿಡಿದು ನಡುರಸ್ತೆಯಲ್ಲೆ ಎಳೆದಾಡಿದ ಪ್ರಕರಣ ನಡೆದಿದೆ.
ಅನುಮತಿ ಅತ್ತಿಗೇರಿ ಎಂಬ ಮಹಿಳೆಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ, ಶ್ರೀಕಾಂತ ಮನೆಯೊಳಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ.ಗಲಾಟೆ ಬಿಡಿಸಲು ಬಂದವರಿಗೆ ಬೆದರಿಕೆ ಹಾಕಿರುವ ಅವರು, ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿದ್ದಾರೆ. ಈ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಕುರಿತು ಅನುಮತಿ ಅತ್ತಿಗೇರಿ ಅವರು ಶುಕ್ರವಾರ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.