<p><strong>ಹುಬ್ಬಳ್ಳಿ: </strong>ಮೈಸೂರಿನ ನಾಗೇಂದ್ರ ಎಂ.ಎಸ್., ಮತ್ತು ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಅವರು ಭಾನುವಾರ ಕರ್ನಾಟಕ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಪಡೆದರು.</p>.<p>ಪ್ಯಾರಾ ಶೂಟಿಂಗ್ ಸಂಸ್ಥೆ ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಪಡೆದ ಬಳಿಕ ನಡೆದ ಮೊದಲ ಟೂರ್ನಿ ಇದಾಗಿತ್ತು. 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, 25 ಪ್ಯಾರಾ ಶೂಟರ್ಗಳು ಪಾಲ್ಗೊಂಡಿದ್ದರು.</p>.<p>ಮಹಿಳೆಯರ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ವಿಭಾಗದಲ್ಲಿ ಜ್ಯೋತಿ ಮಾತ್ರ ಭಾಗವಹಿಸಿದ್ದರಿಂದ ಅವರಿಗೆ ಚಿನ್ನದ ಪದಕ ಲಭಿಸಿತು. ಏರ್ ರೈಫಲ್ ಮಿಶ್ರ ಪ್ರೋನ್ ಎಸ್ಎಚ್ 1 ವಿಭಾಗದಲ್ಲಿ ಜ್ಯೋತಿ ಒಟ್ಟು 623.5 ಅಂಕಗಳನ್ನು ಗಳಿಸಿ ಎರಡನೇ ಚಿನ್ನ ಗೆದ್ದುಕೊಂಡರು. ಈ ವಿಭಾಗದ ಬೆಳ್ಳಿ ರಾಕೇಶ ನಿಡಗುಂದಿ (617.4 ಅಂಕ), ಕಂಚು ಶಂಕರಲಿಂಗ ತವಳಿ (610.5) ಪಾಲಾಯಿತು. ಈ ಮೂವರೂ ಪ್ಯಾರಾ ಶೂಟರ್ಗಳು ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.</p>.<p>ಫಲಿತಾಂಶ: ಪುರುಷರ ಏರ್ ಪಿಸ್ತೂಲ್ ಎಸ್ಎಚ್–1: ನಾಗೇಂದ್ರ ಎಂ.ಎಸ್. (ಮೈಸೂರು, 518 ಅಂಕ)–1, ವೇಣುಗೋಪಾಲ ಜಯಚಂದ್ರ (ಹುಬ್ಬಳ್ಳಿ, 505)–2, ಕೇಶವ ತೆಲಗು (ಹುಬ್ಬಳ್ಳಿ, 474).</p>.<p>ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್–1: ರಾಕೇಶ ನಿಡಗುಂದಿ (ಹುಬ್ಬಳ್ಳಿ, 556.2)–1, ಶಂಕರಲಿಂಗ ತವಳಿ (ಹುಬ್ಬಳ್ಳಿ, 514.2), ಮೊಹಮ್ಮದ್ ಇಮ್ರಾನ್ (ಹುಬ್ಬಳ್ಳಿ, 476.3)–3.</p>.<p>ಓಪನ್ ಸೈಟ್: ನಾಗೇಶ ಜಿ.ಕೆ., (ಹಾಸನ, 270)–1, ಸಂತೋಷ ಎನ್. ಭಾಂಡಗೆ (ಗದಗ,267)–2, ಎಲ್. ನಂಜುಂಡರಾವ್ (ಬೆಂಗಳೂರು, 238)–3.</p>.<p>ಮಹಿಳಾ ವಿಭಾಗದ ಓಪನ್ ಸೈಟ್: ಕಮಲಾಕ್ಷ್ಮಿ ಎಸ್.ಡಿ. (ಹಾಸನ, 211)–1, ಸಂಗಮ್ಮ ಬಿ. ಆಲದಗಿಡದ (ಹುಬ್ಬಳ್ಳಿ, 168), ಸುಧಾ ಎ., (ದಾವಣಗೆರೆ, 143)–3.</p>.<p><strong>ಅಂಗವಿಕಲರ ಸಂಸ್ಥೆ ಮಾನ್ಯತೆ</strong></p>.<p><strong>ಹುಬ್ಬಳ್ಳಿ:</strong> ರಾಜ್ಯದಲ್ಲಿ ಪ್ಯಾರಾ ಶೂಟರ್ಗಳಿಗೆ ಉತ್ತೇಜನ ನೀಡಲು ಕರ್ನಾಟಕ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಸಂಸ್ಥೆ ಆರಂಭಿಸಲಾಗಿದೆ.</p>.<p>ಇದು ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಹೊಂದಿದ್ದು, ಶೂಟಿಂಗ್ ಸಂಸ್ಥೆಯ ಉದ್ಘಾಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನೆರವೇರಿತು.</p>.<p>ರಾಜ್ಯ ಅಂಗವಿಕಲರ ಸಂಸ್ಥೆ ಅಧ್ಯಕ್ಷ ಎಂ. ಮಹದೇವ, ಪ್ಯಾರಾ ಶೂಟಿಂಗ್ ಸಂಸ್ಥೆ ಅಧ್ಯಕ್ಷ ಹಾಗೂ ಒಲಿಂಪಿಯನ್ ಪಿ.ಎನ್. ಪ್ರಕಾಶ, ಕಾರ್ಯದರ್ಶಿ ರವಿಚಂದ್ರ ಬಾಲೆಹೊಸೂರ, ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಸ್ವರೂಪ್ ಉನಲಕರ್ ಇದ್ದರು.</p>.<p>* ದೃಢ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಮುಂದಿನ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನಿಮ್ಮ ಮುಂದೆ ಬರುವೆ<br /><em><strong>-ಸ್ವರೂಪ್ ಉನಲಕರ್, ಪ್ಯಾರಾಲಿಂಪಿಯನ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಮೈಸೂರಿನ ನಾಗೇಂದ್ರ ಎಂ.ಎಸ್., ಮತ್ತು ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಅವರು ಭಾನುವಾರ ಕರ್ನಾಟಕ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಪಡೆದರು.</p>.<p>ಪ್ಯಾರಾ ಶೂಟಿಂಗ್ ಸಂಸ್ಥೆ ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಪಡೆದ ಬಳಿಕ ನಡೆದ ಮೊದಲ ಟೂರ್ನಿ ಇದಾಗಿತ್ತು. 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, 25 ಪ್ಯಾರಾ ಶೂಟರ್ಗಳು ಪಾಲ್ಗೊಂಡಿದ್ದರು.</p>.<p>ಮಹಿಳೆಯರ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ವಿಭಾಗದಲ್ಲಿ ಜ್ಯೋತಿ ಮಾತ್ರ ಭಾಗವಹಿಸಿದ್ದರಿಂದ ಅವರಿಗೆ ಚಿನ್ನದ ಪದಕ ಲಭಿಸಿತು. ಏರ್ ರೈಫಲ್ ಮಿಶ್ರ ಪ್ರೋನ್ ಎಸ್ಎಚ್ 1 ವಿಭಾಗದಲ್ಲಿ ಜ್ಯೋತಿ ಒಟ್ಟು 623.5 ಅಂಕಗಳನ್ನು ಗಳಿಸಿ ಎರಡನೇ ಚಿನ್ನ ಗೆದ್ದುಕೊಂಡರು. ಈ ವಿಭಾಗದ ಬೆಳ್ಳಿ ರಾಕೇಶ ನಿಡಗುಂದಿ (617.4 ಅಂಕ), ಕಂಚು ಶಂಕರಲಿಂಗ ತವಳಿ (610.5) ಪಾಲಾಯಿತು. ಈ ಮೂವರೂ ಪ್ಯಾರಾ ಶೂಟರ್ಗಳು ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.</p>.<p>ಫಲಿತಾಂಶ: ಪುರುಷರ ಏರ್ ಪಿಸ್ತೂಲ್ ಎಸ್ಎಚ್–1: ನಾಗೇಂದ್ರ ಎಂ.ಎಸ್. (ಮೈಸೂರು, 518 ಅಂಕ)–1, ವೇಣುಗೋಪಾಲ ಜಯಚಂದ್ರ (ಹುಬ್ಬಳ್ಳಿ, 505)–2, ಕೇಶವ ತೆಲಗು (ಹುಬ್ಬಳ್ಳಿ, 474).</p>.<p>ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್–1: ರಾಕೇಶ ನಿಡಗುಂದಿ (ಹುಬ್ಬಳ್ಳಿ, 556.2)–1, ಶಂಕರಲಿಂಗ ತವಳಿ (ಹುಬ್ಬಳ್ಳಿ, 514.2), ಮೊಹಮ್ಮದ್ ಇಮ್ರಾನ್ (ಹುಬ್ಬಳ್ಳಿ, 476.3)–3.</p>.<p>ಓಪನ್ ಸೈಟ್: ನಾಗೇಶ ಜಿ.ಕೆ., (ಹಾಸನ, 270)–1, ಸಂತೋಷ ಎನ್. ಭಾಂಡಗೆ (ಗದಗ,267)–2, ಎಲ್. ನಂಜುಂಡರಾವ್ (ಬೆಂಗಳೂರು, 238)–3.</p>.<p>ಮಹಿಳಾ ವಿಭಾಗದ ಓಪನ್ ಸೈಟ್: ಕಮಲಾಕ್ಷ್ಮಿ ಎಸ್.ಡಿ. (ಹಾಸನ, 211)–1, ಸಂಗಮ್ಮ ಬಿ. ಆಲದಗಿಡದ (ಹುಬ್ಬಳ್ಳಿ, 168), ಸುಧಾ ಎ., (ದಾವಣಗೆರೆ, 143)–3.</p>.<p><strong>ಅಂಗವಿಕಲರ ಸಂಸ್ಥೆ ಮಾನ್ಯತೆ</strong></p>.<p><strong>ಹುಬ್ಬಳ್ಳಿ:</strong> ರಾಜ್ಯದಲ್ಲಿ ಪ್ಯಾರಾ ಶೂಟರ್ಗಳಿಗೆ ಉತ್ತೇಜನ ನೀಡಲು ಕರ್ನಾಟಕ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ಸಂಸ್ಥೆ ಆರಂಭಿಸಲಾಗಿದೆ.</p>.<p>ಇದು ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಹೊಂದಿದ್ದು, ಶೂಟಿಂಗ್ ಸಂಸ್ಥೆಯ ಉದ್ಘಾಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನೆರವೇರಿತು.</p>.<p>ರಾಜ್ಯ ಅಂಗವಿಕಲರ ಸಂಸ್ಥೆ ಅಧ್ಯಕ್ಷ ಎಂ. ಮಹದೇವ, ಪ್ಯಾರಾ ಶೂಟಿಂಗ್ ಸಂಸ್ಥೆ ಅಧ್ಯಕ್ಷ ಹಾಗೂ ಒಲಿಂಪಿಯನ್ ಪಿ.ಎನ್. ಪ್ರಕಾಶ, ಕಾರ್ಯದರ್ಶಿ ರವಿಚಂದ್ರ ಬಾಲೆಹೊಸೂರ, ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಸ್ವರೂಪ್ ಉನಲಕರ್ ಇದ್ದರು.</p>.<p>* ದೃಢ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಮುಂದಿನ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನಿಮ್ಮ ಮುಂದೆ ಬರುವೆ<br /><em><strong>-ಸ್ವರೂಪ್ ಉನಲಕರ್, ಪ್ಯಾರಾಲಿಂಪಿಯನ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>