<p><strong>ಧಾರವಾಡ:</strong>ಸಮ್ಮೇಳನದಲ್ಲಿ ನಡೆಯುತ್ತಿರುವ ಗೋಷ್ಠಿಯಲ್ಲಿ ನಟಿಮಾಳವಿಕಾ ಅವಿನಾಶ್ ಅವರ ಭಾಷಣಕ್ಕೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ 4ರಲ್ಲಿ ವೈಚಾರಿಕತೆ ಮತ್ತು ಅಸಹಿಷ್ಣುತೆವಿಷಯ ಮಂಡನೆಯಲ್ಲಿ ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾಳವಿಕಾ ಮಾತನಾಡುತ್ತಿದ್ದಾಗ ಸಭಿಕರು ಆಕ್ಷೇಪ</p>.<p>ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದರು.</p>.<p>ಮಾತಾಡಲು ಬಿಡದವರ ಅಸಹಿಷ್ಣುತೆ ಪ್ರತಿಭಟಿಸಿ ಮಾತು ಮಾಳವಿಕಾ ಮೊಟಕುಗೊಳಿಸಿದರು.</p>.<p>ಕೆಲವು ಸಭಿಕರ ಒತ್ತಾಯಕ್ಕೆ ಮಣಿದು, ಸಹಿಷ್ಣುವಾಗಿ ಮಾತು ಆರಂಭಿಸುತ್ತೇನೆ ಎಂದು ಮಾಳವಿಕಾ ಹೇಳಿದರು.</p>.<p>ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಿಚಾರ ಮಂಡಿಸಲು ಅವಕಾಶವಿದೆ. ಆದರೆ ಅದಕ್ಕೆ ಸಕಾರಣ ಇರಬೇಕಷ್ಟೆ. ಅದಕ್ಕೆ ರಾಷ್ಟ್ರ ಚಿಂತನೆ ಇರಬೇಕು ಎಂದರು.</p>.<p>ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾತನಾಡಿದ ಮಾಳವಿಕಾ, ಪರಮೇಶ್ ಮೆಸ್ತ, ರುದ್ರೇಶ್, ಶರತ್ ಕೊಲೆ ಪ್ರಸ್ತಾಪಿಸಿ ಇದು ಅಸಹಿಷ್ಣುತೆ ಅಲ್ಲವೇ. ಸನಾತನ ಧರ್ಮ ನಿರಂತರ ಇಂತಹ ದಾಳಿಗೆ ತುತ್ತಾಗಿದ್ದರೂ, ಅದು 5 ಸಾವಿರ ವರ್ಷಗಳಿಂದ ಸಹಜ ಸಹಿಷ್ಣುತೆ ಕಾಪಾಡಿಕೊಂಡಿದೆ ಎಂದು ಪ್ರತಿಪಾದಿಸಿದರು.</p>.<p>ಅಸಹಿಷ್ಣುತೆ ಮತ್ತು ಲಿಂಚಿಂಗ್ ಎಂಬ ಪದ ಹುಡುಕಿದ ಬುದ್ಧಿವಂತರಿಗೆ, ಸಿಕ್ಕ್ ನರಮೇಧ, 2005ರಿಂದ 09ರವರೆಗೆ ಅಸಹಿಷ್ಣುತೆಗೆ 530 ಬಲಿಯಾಗಿದ್ದಾರೆ ಎಂಬುದು ಅರ್ಥವಾಗಲಿಲ್ಲವೇ? ಆ ಕಾಲಘಟ್ಟದಲ್ಲಿ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.</p>.<p>ಕಳೆದ 60 ವರ್ಷದಲ್ಲಿ 102 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನೇ ಪುನರ್ ಪ್ರಶ್ನಿಸಲು ನಮ್ಮಲ್ಲಿ ಅವಕಾಶವಿದೆ. ಇದು ಈ ದೇಶದ ಸಹಿಷ್ಣುತೆ ಎಂದು ಮಾಳವಿಕಾ ಮಾತು ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong>ಸಮ್ಮೇಳನದಲ್ಲಿ ನಡೆಯುತ್ತಿರುವ ಗೋಷ್ಠಿಯಲ್ಲಿ ನಟಿಮಾಳವಿಕಾ ಅವಿನಾಶ್ ಅವರ ಭಾಷಣಕ್ಕೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ 4ರಲ್ಲಿ ವೈಚಾರಿಕತೆ ಮತ್ತು ಅಸಹಿಷ್ಣುತೆವಿಷಯ ಮಂಡನೆಯಲ್ಲಿ ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾಳವಿಕಾ ಮಾತನಾಡುತ್ತಿದ್ದಾಗ ಸಭಿಕರು ಆಕ್ಷೇಪ</p>.<p>ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದರು.</p>.<p>ಮಾತಾಡಲು ಬಿಡದವರ ಅಸಹಿಷ್ಣುತೆ ಪ್ರತಿಭಟಿಸಿ ಮಾತು ಮಾಳವಿಕಾ ಮೊಟಕುಗೊಳಿಸಿದರು.</p>.<p>ಕೆಲವು ಸಭಿಕರ ಒತ್ತಾಯಕ್ಕೆ ಮಣಿದು, ಸಹಿಷ್ಣುವಾಗಿ ಮಾತು ಆರಂಭಿಸುತ್ತೇನೆ ಎಂದು ಮಾಳವಿಕಾ ಹೇಳಿದರು.</p>.<p>ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಿಚಾರ ಮಂಡಿಸಲು ಅವಕಾಶವಿದೆ. ಆದರೆ ಅದಕ್ಕೆ ಸಕಾರಣ ಇರಬೇಕಷ್ಟೆ. ಅದಕ್ಕೆ ರಾಷ್ಟ್ರ ಚಿಂತನೆ ಇರಬೇಕು ಎಂದರು.</p>.<p>ಪ್ರಭುತ್ವ ಮತ್ತು ಅಸಹಿಷ್ಣುತೆ ಕುರಿತು ಮಾತನಾಡಿದ ಮಾಳವಿಕಾ, ಪರಮೇಶ್ ಮೆಸ್ತ, ರುದ್ರೇಶ್, ಶರತ್ ಕೊಲೆ ಪ್ರಸ್ತಾಪಿಸಿ ಇದು ಅಸಹಿಷ್ಣುತೆ ಅಲ್ಲವೇ. ಸನಾತನ ಧರ್ಮ ನಿರಂತರ ಇಂತಹ ದಾಳಿಗೆ ತುತ್ತಾಗಿದ್ದರೂ, ಅದು 5 ಸಾವಿರ ವರ್ಷಗಳಿಂದ ಸಹಜ ಸಹಿಷ್ಣುತೆ ಕಾಪಾಡಿಕೊಂಡಿದೆ ಎಂದು ಪ್ರತಿಪಾದಿಸಿದರು.</p>.<p>ಅಸಹಿಷ್ಣುತೆ ಮತ್ತು ಲಿಂಚಿಂಗ್ ಎಂಬ ಪದ ಹುಡುಕಿದ ಬುದ್ಧಿವಂತರಿಗೆ, ಸಿಕ್ಕ್ ನರಮೇಧ, 2005ರಿಂದ 09ರವರೆಗೆ ಅಸಹಿಷ್ಣುತೆಗೆ 530 ಬಲಿಯಾಗಿದ್ದಾರೆ ಎಂಬುದು ಅರ್ಥವಾಗಲಿಲ್ಲವೇ? ಆ ಕಾಲಘಟ್ಟದಲ್ಲಿ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.</p>.<p>ಕಳೆದ 60 ವರ್ಷದಲ್ಲಿ 102 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನೇ ಪುನರ್ ಪ್ರಶ್ನಿಸಲು ನಮ್ಮಲ್ಲಿ ಅವಕಾಶವಿದೆ. ಇದು ಈ ದೇಶದ ಸಹಿಷ್ಣುತೆ ಎಂದು ಮಾಳವಿಕಾ ಮಾತು ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>