ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆನ್ನುಹುರಿ ಸಮಸ್ಯೆಯಿಂದಾಗಿ ಆ ವ್ಯಕ್ತಿಗೆ ಸರಿಯಾಗಿ ನಡೆದಾಡಲೂ ಸಾಧ್ಯವಾಗದೆ ಯಾತನೆ ಅನುಭವಿಸುತ್ತಿದ್ದರು. ಹಲವು ಪರೀಕ್ಷೆಗಳ ಬಳಿಕ ಸೊಂಟದ ಭಾಗದಿಂದ ಕಾಲುಗಳಿಗೆ ಹೋಗುವ ನರಗಳ ಮೇಲೆ ಒತ್ತಡ ಬಿದ್ದು ಸೋಂಟ ನೋವು, ಚಿಪ್ಪೆ ಭಾಗದಲ್ಲಿ ನೋವು, ಕಾಲುಗಳಲ್ಲಿ ಸೆಳೆತ ಮತ್ತು ಸ್ಪರ್ಶ ಜ್ಞಾನ ಕಡಿಮೆಯಾಗುತ್ತಿರುವ ಅಂಶಗಳು ಬೆಳಕಿಗೆ ಬಂದವು. ಮೈಕ್ರೊಸ್ಕೋಪ್ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ‘ಮಿನಿಮಲ್ ಇನ್ ವೆನ್ ಸ್ಯೂ ಮೈಕ್ರೊಪಿಸ್ಕೋಪಿಕ್ ಟೂಬಿಲರ್ ಲಂಬಾರ್ ಡಿಸ್ ಟೆಕ್ಟಲೊ’ ಎನ್ನಲಾಗುತ್ತದೆ’ ಎಂದರು.