<p><strong>ಕಲಘಟಗಿ:</strong> ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಹೊಲದ ಮನೆಯಲ್ಲಿ ಕಟ್ಟಿದ್ದ ಸಾಕುನಾಯಿಯನ್ನು ಚಿರತೆಯೊಂದು ತಿಂದು ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.</p>.<p>ಗ್ರಾಮದ ಮಹಾದೇವಪ್ಪ ದೇಸಾಯಿ ಅವರು ಬೆಳಿಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಮನೆ ಹೊರಗೆ ಕಟ್ಟಿರುವ ನಾಯಿ ತಿಂದು ಹಾಕಿದ್ದು ಮನೆಯ ಸುತ್ತಮುತ್ತ ಹಾಗೂ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.</p>.<p>ಹಲವು ದಿನಗಳಿಂದ ತಾಲ್ಲೂಕಿನ ಸುತಗಟ್ಟಿ, ತಬಕದಹೊನ್ನಳ್ಳಿ ಹಾಗೂ ಮಲಕನಕೊಪ್ಪ ಗ್ರಾಮದ ಹೊರವಲಯದ ಗುಡ್ಡಗಾಡುಗಳಲ್ಲಿ ಚಿರತೆ ಕಂಡು ಬರುತ್ತಿರುವದರಿಂದ ರೈತರು ಜಮೀನಿಗೆ ತೆರಳಲು ಭಯ ಪಡುವಂತೆ ಆಗಿದೆ.</p>.<p>‘ಕಳೆದ 10 ದಿನಗಳಿಂದ ತಬಕದೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ. ನಮ್ಮ ಸಿಬ್ಬಂದಿ ಚಿರತೆಯನ್ನು ಕಾಡಿನತ್ತ ಓಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.</p>.<p>ಉತ್ತಮ ಮಳೆ ಆಗಿರುವುದರಿಂದ ರೈತರು ಜಮೀನುಗಳಲ್ಲಿ ಮೆಕ್ಕೆಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆ ಬೆಳೆದಿದ್ದಾರೆ. ತೇವಾಂಶದಿಂದ ಆಳೆತ್ತರವಾಗಿ ಬೆಳೆಗಳು ಬೆಳೆದಿದ್ದು, ಚಿರತೆ ಯಾವ ದಿಕ್ಕಿನಲ್ಲಿ ಹೋಗಿದೆ ಎನ್ನುವುದು ಅರಣ್ಯ ಇಲಾಖೆಗೆ ತಿಳಿಯುತ್ತಿಲ್ಲ.</p>.<p>‘ಈ ಭಾಗದ ಪರಿಸರದಲ್ಲಿ ಸಹಜವಾಗಿ ಚಿರತೆಗಳು ಓಡಾಡುವ ತಾಣವಾಗಿದ್ದು, ರೈತರು ಜಮೀನಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕು. ಚಿರತೆ ಹೆಜ್ಜೆ, ಜಾಡು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ’ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ:</strong> ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಹೊಲದ ಮನೆಯಲ್ಲಿ ಕಟ್ಟಿದ್ದ ಸಾಕುನಾಯಿಯನ್ನು ಚಿರತೆಯೊಂದು ತಿಂದು ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.</p>.<p>ಗ್ರಾಮದ ಮಹಾದೇವಪ್ಪ ದೇಸಾಯಿ ಅವರು ಬೆಳಿಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಮನೆ ಹೊರಗೆ ಕಟ್ಟಿರುವ ನಾಯಿ ತಿಂದು ಹಾಕಿದ್ದು ಮನೆಯ ಸುತ್ತಮುತ್ತ ಹಾಗೂ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.</p>.<p>ಹಲವು ದಿನಗಳಿಂದ ತಾಲ್ಲೂಕಿನ ಸುತಗಟ್ಟಿ, ತಬಕದಹೊನ್ನಳ್ಳಿ ಹಾಗೂ ಮಲಕನಕೊಪ್ಪ ಗ್ರಾಮದ ಹೊರವಲಯದ ಗುಡ್ಡಗಾಡುಗಳಲ್ಲಿ ಚಿರತೆ ಕಂಡು ಬರುತ್ತಿರುವದರಿಂದ ರೈತರು ಜಮೀನಿಗೆ ತೆರಳಲು ಭಯ ಪಡುವಂತೆ ಆಗಿದೆ.</p>.<p>‘ಕಳೆದ 10 ದಿನಗಳಿಂದ ತಬಕದೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ. ನಮ್ಮ ಸಿಬ್ಬಂದಿ ಚಿರತೆಯನ್ನು ಕಾಡಿನತ್ತ ಓಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.</p>.<p>ಉತ್ತಮ ಮಳೆ ಆಗಿರುವುದರಿಂದ ರೈತರು ಜಮೀನುಗಳಲ್ಲಿ ಮೆಕ್ಕೆಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆ ಬೆಳೆದಿದ್ದಾರೆ. ತೇವಾಂಶದಿಂದ ಆಳೆತ್ತರವಾಗಿ ಬೆಳೆಗಳು ಬೆಳೆದಿದ್ದು, ಚಿರತೆ ಯಾವ ದಿಕ್ಕಿನಲ್ಲಿ ಹೋಗಿದೆ ಎನ್ನುವುದು ಅರಣ್ಯ ಇಲಾಖೆಗೆ ತಿಳಿಯುತ್ತಿಲ್ಲ.</p>.<p>‘ಈ ಭಾಗದ ಪರಿಸರದಲ್ಲಿ ಸಹಜವಾಗಿ ಚಿರತೆಗಳು ಓಡಾಡುವ ತಾಣವಾಗಿದ್ದು, ರೈತರು ಜಮೀನಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕು. ಚಿರತೆ ಹೆಜ್ಜೆ, ಜಾಡು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ’ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>