<p><strong>ಹುಬ್ಬಳ್ಳಿ:</strong> ‘ಅನ್ಯಾಯದ ವಿರುದ್ಧ ಹೋರಾಡಲು ನರಬಲಿ ಮಾಡಬೇಕಾಗುತ್ತದೆ ಎಂಬ ವರಕವಿ ದ.ರಾ.ಬೇಂದ್ರೆ ಅವರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ರಾಕ್ಷಸಿ ಆಡಳಿತ ಕೊನೆಯಾಗಬೇಕು, ಪ್ರಜಾಪ್ರಭುತ್ವ ಗೆಲ್ಲಬೇಕು’ ಎಂದು ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ಶರ್ಮಾ ಹೇಳಿದರು.</p>.<p>ಇಲ್ಲಿನ ಗೋಕುಲ ರಸ್ತೆಯ ಡಾ.ಕೆ.ಎಸ್.ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ದ.ರಾ.ಬೇಂದ್ರೆಯವರ 130ನೇ ಜನ್ಮದಿನಾಚರಣೆ, ವಿದ್ಯಾವಿನಾಯಕ ದೇವಾಲಯದ 4ನೇ ವಾರ್ಷಿಕೋತ್ಸವ ಹಾಗೂ ಕಲಬುರಗಿಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬೇಂದ್ರೆ ಅವರು ನರಬಲಿ ಕವನ ಬರೆದು ಜೈಲುವಾಸ ಅನುಭವಿಸಬೇಕಾಯಿತು. ನರಬಲಿ ಮಾಡೋಕೆ ಸಿದ್ಧರಾಗಿ, ಭಜನೆ ಮಾಡುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ಅವರು ಸಾರಿದ್ದರು’ ಎಂದರು.</p>.<p>ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕೆ.ಎಸ್.ಶರ್ಮಾ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ವೆಂಕಟೇಶ ಶಿಂದಿಹಟ್ಟಿ ಮಾತನಾಡಿದರು. ದ.ರಾ.ಬೇಂದ್ರೆಯವರು ರಚಿಸಿದ ‘ಗೋಲ್’ ಹಾಗೂ ‘ಶೋಭನಾ’ ನಾಟಕ ಕೃತಿಗಳ ಮರುಮುದ್ರಣಗೊಂಡ ಕೃತಿಗಳು ಮತ್ತು ಹನುಮಂತ ಅಂಕುಶ ಅವರು ರಚಿಸಿದ ‘ನಾ ಕಂಡಂತೆ ಕೆ.ಎಸ್.ಶರ್ಮಾ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಎನ್.ಬಿ.ಕುಲಕರ್ಣಿ, ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ, ಸುಮಿತ್ರಾ ಪೋತ್ನೀಸ್, ಸುಲೋಚನಾ ಪೋತ್ನಿಸ್, ಅಶ್ವಿನಿ ಶಿಂದಿಹಟ್ಟಿ, ಶ್ರೀನಿವಾಸ ಬನ್ನಿಗೋಳ, ಸಿ.ಸಿ.ಹಿರೇಮಠ, ಸೋಮಶೇಖರ್ ಹುದ್ದಾರ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಅನ್ಯಾಯದ ವಿರುದ್ಧ ಹೋರಾಡಲು ನರಬಲಿ ಮಾಡಬೇಕಾಗುತ್ತದೆ ಎಂಬ ವರಕವಿ ದ.ರಾ.ಬೇಂದ್ರೆ ಅವರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ರಾಕ್ಷಸಿ ಆಡಳಿತ ಕೊನೆಯಾಗಬೇಕು, ಪ್ರಜಾಪ್ರಭುತ್ವ ಗೆಲ್ಲಬೇಕು’ ಎಂದು ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ಶರ್ಮಾ ಹೇಳಿದರು.</p>.<p>ಇಲ್ಲಿನ ಗೋಕುಲ ರಸ್ತೆಯ ಡಾ.ಕೆ.ಎಸ್.ಶರ್ಮಾ ಕಾಲೇಜಿನ ಸಭಾಂಗಣದಲ್ಲಿ ದ.ರಾ.ಬೇಂದ್ರೆಯವರ 130ನೇ ಜನ್ಮದಿನಾಚರಣೆ, ವಿದ್ಯಾವಿನಾಯಕ ದೇವಾಲಯದ 4ನೇ ವಾರ್ಷಿಕೋತ್ಸವ ಹಾಗೂ ಕಲಬುರಗಿಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಅವರಿಗೆ ‘ಬೆನಕಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬೇಂದ್ರೆ ಅವರು ನರಬಲಿ ಕವನ ಬರೆದು ಜೈಲುವಾಸ ಅನುಭವಿಸಬೇಕಾಯಿತು. ನರಬಲಿ ಮಾಡೋಕೆ ಸಿದ್ಧರಾಗಿ, ಭಜನೆ ಮಾಡುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ಅವರು ಸಾರಿದ್ದರು’ ಎಂದರು.</p>.<p>ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕೆ.ಎಸ್.ಶರ್ಮಾ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ವೆಂಕಟೇಶ ಶಿಂದಿಹಟ್ಟಿ ಮಾತನಾಡಿದರು. ದ.ರಾ.ಬೇಂದ್ರೆಯವರು ರಚಿಸಿದ ‘ಗೋಲ್’ ಹಾಗೂ ‘ಶೋಭನಾ’ ನಾಟಕ ಕೃತಿಗಳ ಮರುಮುದ್ರಣಗೊಂಡ ಕೃತಿಗಳು ಮತ್ತು ಹನುಮಂತ ಅಂಕುಶ ಅವರು ರಚಿಸಿದ ‘ನಾ ಕಂಡಂತೆ ಕೆ.ಎಸ್.ಶರ್ಮಾ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಎನ್.ಬಿ.ಕುಲಕರ್ಣಿ, ಧಾರವಾಡ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ, ಸುಮಿತ್ರಾ ಪೋತ್ನೀಸ್, ಸುಲೋಚನಾ ಪೋತ್ನಿಸ್, ಅಶ್ವಿನಿ ಶಿಂದಿಹಟ್ಟಿ, ಶ್ರೀನಿವಾಸ ಬನ್ನಿಗೋಳ, ಸಿ.ಸಿ.ಹಿರೇಮಠ, ಸೋಮಶೇಖರ್ ಹುದ್ದಾರ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>