<p><strong>ಧಾರವಾಡ:</strong> ಬೆಳಗಾವಿ ವಿಭಾಗದ ಕೃಷಿ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ದಾಳಿ ನಡೆಸಿದ್ದು, ಶೌಚಾಲಯದ ಕಮೊಡ್ ಭಾಗದಲ್ಲಿ ₹ 500 ಮೌಲ್ಯದ ಕೆಲ ಹರಿದ ನೋಟುಗಳು ಸಿಕ್ಕಿವೆ.</p>.<p>ಅಕ್ರಮ ಆಸ್ತಿ ಸಂಪಾದನೆ ದೂರಿನಡಿ ಅಧಿಕಾರಿಗಳು ನಗರದ ಆರ್ಚಿಡ್ ಸಿಲ್ವರ್ ಬಡವಾಣೆಯಲ್ಲಿ ಇರುವ ರಾಜಶೇಖರ ಅವರ ‘ಅಂಜನಾದ್ರಿ’ ಮನೆಗೆ ತೆರಳಿ, ದಾಳಿ ಮಾಡಿದರು. ನೋಟುಗಳನ್ನು ತುಂಡು ಮಾಡಿ ಕಮೊಡ್ಗೆ ಹಾಕಿ ಪ್ಲಶ್ ಮಾಡಿದ್ದು ಪರಿಶೀಲನೆ ನಡೆಸಿದಾಗ ಲೋಕಾಯುಕ್ತ ಅಧಿಕಾರಿಗಳಿಗೆ ಗೊತ್ತಾಗಿದೆ.</p>.<p>‘ರಾಜಶೇಖರ ಅವರು ಮನೆಯಲ್ಲಿ ಇದ್ದರು. ಕೋಣೆಯ ಬಾಗಿಲು ತೆರೆಯಲು ಅರ್ಧ ಗಂಟೆ ತಡ ಮಾಡಿದರು. ₹ 500 ಮೌಲ್ಯದ ನೋಟುಗಳನ್ನು ಹರಿದು ಕಮೊಡ್ಗೆ ಹಾಕಿ ಫ್ಲಶ್ ಮಾಡಿದ್ದಾರೆ. ಹರಿದ ಕೆಲ ನೋಟುಗಳು ಸಿಕ್ಕಿವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಧಾರವಾಡದ ಆರ್ಚಿಡ್ ಸಿಲ್ವರ್ ಬಡಾವಣೆ ಮತ್ತು ರಾಣಿಚನ್ನಮ್ಮ ನಗರದ ಮನೆಗಳು, ಯರ್ರಿಕೊಪ್ಪದ ಫಾರಂ ಹೌಸ್, ಹಾವೇರಿಯ ಜಿಲ್ಲೆಯ ಶಿಗ್ಗಾಂವಿಯ ಮೋಜಿನ ಉದ್ಯಾನ ಹಾಗೂ ಬೆಳಗಾವಿಯ ಕಚೇರಿಯಲ್ಲೂ ನಡೆದಿದೆ. ಬ್ಯಾಂಕ್ ಪಾಸ್ ಬುಕ್ಗಳು, ಆಸ್ತಿ ದಾಖಲೆಗಳು, ಒಡವೆ ಇತ್ಯಾದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.</p>.<p>‘ಮೂರು ಮನೆ (ಫಾರಂ ಹೌಸ್ ಸಹಿತ), 3 ನಿವೇಶನ ಮತ್ತು, 6.5 ಎಕರೆ ಜಮೀನು ಮೌಲ್ಯ (₹ 5.34 ಕೋಟಿ), ₹ 18 ಲಕ್ಷ ಮೌಲ್ಯದ ಚಿನ್ನಾಭರಣ, 3 ದಿಚಕ್ರವಾಹನ ಮತ್ತು 1 ಕಾರು ಒಟ್ಟು 4 ವಾಹನಗಳು (ಮೌಲ್ಯ ₹ 39 ಲಕ್ಷ), ನಗದು ₹ 80 ಸಾವಿರ, ಇತರ ವಸ್ತುಗಳು (ಮೌಲ್ಯ 15 ಲಕ್ಷ) ಇವೆ. ಪತ್ತೆಯಾಗಿರುವ ಒಟ್ಟು ಆಸ್ತಿ ಮೌಲ್ಯ ₹ 6.07 ಕೋಟಿ, ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಲೋಕಾಯಕ್ತ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ತಂಡಗಳು ದಾಳಿ ನಡೆಸಿವೆ.</p>.<p><strong>ಡಿಎಚ್ಒ ಬಳಿ ₹4.89 ಕೋಟಿ ಅಕ್ರಮ ಆಸ್ತಿ</strong> </p><p>ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ.ಎಲ್.ಆರ್.ಶಂಕರ್ ನಾಯ್ಕ್ ಅವರ ಬಳಿ ನಿಗದಿತ ಆಸ್ತಿಗಿಂತ ಹೆಚ್ಚುವರಿಯಾಗಿ ₹4.89 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಲೋಕಯುಕ್ತ ಪ್ರಕಟಣೆ ತಿಳಿಸಿದೆ. ಡಿಎಚ್ಒ ಅವರಿಗೆ ಸಂಬಂಧಿಸಿದ 4 ಕಡೆಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿತ್ತು. ಆಗ ₹4.20 ಕೋಟಿ ಮೌಲ್ಯದ 11 ನಿವೇಶನಗಳು ಐದು ವಾಸದ ಮನೆಗಳು (ಸ್ಥಿರಾಸ್ತಿ) ಪತ್ತೆಯಾಗಿವೆ. ₹69.82 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಲ್ಲಿ ₹15.56 ಲಕ್ಷ ನಗದು ₹16.75 ಲಕ್ಷ ಮೌಲ್ಯದ ಚಿನ್ನಾಭರಣ ₹9.60 ಲಕ್ಷ ಮೌಲ್ಯದ ವಾಹನಗಳು ₹31.90 ಲಕ್ಷ ಮೌಲ್ಯದ ಪೀಠೋಪಕರಣ ಮತ್ತು ಇತರ ವಸ್ತುಗಳು ಸೇರಿವೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಬೆಳಗಾವಿ ವಿಭಾಗದ ಕೃಷಿ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ದಾಳಿ ನಡೆಸಿದ್ದು, ಶೌಚಾಲಯದ ಕಮೊಡ್ ಭಾಗದಲ್ಲಿ ₹ 500 ಮೌಲ್ಯದ ಕೆಲ ಹರಿದ ನೋಟುಗಳು ಸಿಕ್ಕಿವೆ.</p>.<p>ಅಕ್ರಮ ಆಸ್ತಿ ಸಂಪಾದನೆ ದೂರಿನಡಿ ಅಧಿಕಾರಿಗಳು ನಗರದ ಆರ್ಚಿಡ್ ಸಿಲ್ವರ್ ಬಡವಾಣೆಯಲ್ಲಿ ಇರುವ ರಾಜಶೇಖರ ಅವರ ‘ಅಂಜನಾದ್ರಿ’ ಮನೆಗೆ ತೆರಳಿ, ದಾಳಿ ಮಾಡಿದರು. ನೋಟುಗಳನ್ನು ತುಂಡು ಮಾಡಿ ಕಮೊಡ್ಗೆ ಹಾಕಿ ಪ್ಲಶ್ ಮಾಡಿದ್ದು ಪರಿಶೀಲನೆ ನಡೆಸಿದಾಗ ಲೋಕಾಯುಕ್ತ ಅಧಿಕಾರಿಗಳಿಗೆ ಗೊತ್ತಾಗಿದೆ.</p>.<p>‘ರಾಜಶೇಖರ ಅವರು ಮನೆಯಲ್ಲಿ ಇದ್ದರು. ಕೋಣೆಯ ಬಾಗಿಲು ತೆರೆಯಲು ಅರ್ಧ ಗಂಟೆ ತಡ ಮಾಡಿದರು. ₹ 500 ಮೌಲ್ಯದ ನೋಟುಗಳನ್ನು ಹರಿದು ಕಮೊಡ್ಗೆ ಹಾಕಿ ಫ್ಲಶ್ ಮಾಡಿದ್ದಾರೆ. ಹರಿದ ಕೆಲ ನೋಟುಗಳು ಸಿಕ್ಕಿವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಧಾರವಾಡದ ಆರ್ಚಿಡ್ ಸಿಲ್ವರ್ ಬಡಾವಣೆ ಮತ್ತು ರಾಣಿಚನ್ನಮ್ಮ ನಗರದ ಮನೆಗಳು, ಯರ್ರಿಕೊಪ್ಪದ ಫಾರಂ ಹೌಸ್, ಹಾವೇರಿಯ ಜಿಲ್ಲೆಯ ಶಿಗ್ಗಾಂವಿಯ ಮೋಜಿನ ಉದ್ಯಾನ ಹಾಗೂ ಬೆಳಗಾವಿಯ ಕಚೇರಿಯಲ್ಲೂ ನಡೆದಿದೆ. ಬ್ಯಾಂಕ್ ಪಾಸ್ ಬುಕ್ಗಳು, ಆಸ್ತಿ ದಾಖಲೆಗಳು, ಒಡವೆ ಇತ್ಯಾದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.</p>.<p>‘ಮೂರು ಮನೆ (ಫಾರಂ ಹೌಸ್ ಸಹಿತ), 3 ನಿವೇಶನ ಮತ್ತು, 6.5 ಎಕರೆ ಜಮೀನು ಮೌಲ್ಯ (₹ 5.34 ಕೋಟಿ), ₹ 18 ಲಕ್ಷ ಮೌಲ್ಯದ ಚಿನ್ನಾಭರಣ, 3 ದಿಚಕ್ರವಾಹನ ಮತ್ತು 1 ಕಾರು ಒಟ್ಟು 4 ವಾಹನಗಳು (ಮೌಲ್ಯ ₹ 39 ಲಕ್ಷ), ನಗದು ₹ 80 ಸಾವಿರ, ಇತರ ವಸ್ತುಗಳು (ಮೌಲ್ಯ 15 ಲಕ್ಷ) ಇವೆ. ಪತ್ತೆಯಾಗಿರುವ ಒಟ್ಟು ಆಸ್ತಿ ಮೌಲ್ಯ ₹ 6.07 ಕೋಟಿ, ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಲೋಕಾಯಕ್ತ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ತಂಡಗಳು ದಾಳಿ ನಡೆಸಿವೆ.</p>.<p><strong>ಡಿಎಚ್ಒ ಬಳಿ ₹4.89 ಕೋಟಿ ಅಕ್ರಮ ಆಸ್ತಿ</strong> </p><p>ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ.ಎಲ್.ಆರ್.ಶಂಕರ್ ನಾಯ್ಕ್ ಅವರ ಬಳಿ ನಿಗದಿತ ಆಸ್ತಿಗಿಂತ ಹೆಚ್ಚುವರಿಯಾಗಿ ₹4.89 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಲೋಕಯುಕ್ತ ಪ್ರಕಟಣೆ ತಿಳಿಸಿದೆ. ಡಿಎಚ್ಒ ಅವರಿಗೆ ಸಂಬಂಧಿಸಿದ 4 ಕಡೆಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿತ್ತು. ಆಗ ₹4.20 ಕೋಟಿ ಮೌಲ್ಯದ 11 ನಿವೇಶನಗಳು ಐದು ವಾಸದ ಮನೆಗಳು (ಸ್ಥಿರಾಸ್ತಿ) ಪತ್ತೆಯಾಗಿವೆ. ₹69.82 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಲ್ಲಿ ₹15.56 ಲಕ್ಷ ನಗದು ₹16.75 ಲಕ್ಷ ಮೌಲ್ಯದ ಚಿನ್ನಾಭರಣ ₹9.60 ಲಕ್ಷ ಮೌಲ್ಯದ ವಾಹನಗಳು ₹31.90 ಲಕ್ಷ ಮೌಲ್ಯದ ಪೀಠೋಪಕರಣ ಮತ್ತು ಇತರ ವಸ್ತುಗಳು ಸೇರಿವೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>