<p><strong>ಹುಬ್ಬಳ್ಳಿ:</strong> ‘ಕರ್ನಾಟಕ ಬಂದ್ ಮಾಡಲು ಡಿ.5 ರಂದು ಕರೆ ನೀಡಿರುವವರು ರೋಲ್ಕಾಲ್ ಹೋರಾಟಗಾರರು. ಕನ್ನಡದ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಾರೆ’ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.</p>.<p>ಕೊರೊನಾ ಸೋಂಕು ಜನರ ಆರೋಗ್ಯದ ಮೇಲೆ ಮಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ‘ಆರೋಗ್ಯ ಬಂಧು’ ಆ್ಯಪ್ ಅನ್ನು ಮಂಗಳವಾರ ನಗರದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಯಾವುದೇ ರೀತಿಯಲ್ಲಿ ಇವರು ಸುದ್ದಿಯಲ್ಲಿರಬೇಕು ಎಂದು ಬಯಸುತ್ತಾರೆ ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವಿರುದ್ಧ ಹರಿಹಾಯ್ದ ಅವರು, ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಪ್ರಚಾರವೇ ಅವರಿಗೆ ಮುಖ್ಯ’ ಎಂದು ಟೀಕಿಸಿದರು.</p>.<p>‘ಬಂದ್ಗೆ ಕರೆ ನೀಡಿರುವವರು ನಕಲಿ ಹೋರಾಟಗಾರರಾಗಿದ್ದಾರೆ. ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಹೊರಗಿನಿಂದ ಬಂದ ವ್ಯಾಪಾರಸ್ಥರು ಸೇರಿದಂತೆ ಹಲವರು ಬಳಿ ಕನ್ನಡದ ಹೆಸರಲ್ಲಿ ರೋಲ್ ಕಾಲ್ ಮಾಡುತ್ತಾರೆ’ ಎಂದು ಆರೋಪಿಸಿದರು.</p>.<p>‘ಮರಾಠಾ ಅಭಿವೃದ್ಧಿ ನಿಗಮ ರಚನೆಯನ್ನು ಸ್ವಾಗತಿಸುತ್ತೇನೆ. ಬೀದರ್ನಿಂದ ಬೆಂಗಳೂರು ವರೆಗೆ ಮರಾಠಾ ಸಮಾಜದವರು ನೆಲೆಸಿದ್ದಾರೆ. ಅವರೂ ಕನ್ನಡಿಗರೇ’ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/narayana-gowdas-two-challenges-to-bjp-mla-basanagouda-patil-yatnal-development-corporation-for-780669.html" target="_blank"><strong> </strong>ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಕರವೇ ನಾರಾಯಣಗೌಡರ ಎರಡು ಸವಾಲು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಕರ್ನಾಟಕ ಬಂದ್ ಮಾಡಲು ಡಿ.5 ರಂದು ಕರೆ ನೀಡಿರುವವರು ರೋಲ್ಕಾಲ್ ಹೋರಾಟಗಾರರು. ಕನ್ನಡದ ಹೆಸರಿನಲ್ಲಿ ವಸೂಲಿ ದಂಧೆ ಮಾಡುತ್ತಾರೆ’ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.</p>.<p>ಕೊರೊನಾ ಸೋಂಕು ಜನರ ಆರೋಗ್ಯದ ಮೇಲೆ ಮಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ‘ಆರೋಗ್ಯ ಬಂಧು’ ಆ್ಯಪ್ ಅನ್ನು ಮಂಗಳವಾರ ನಗರದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಯಾವುದೇ ರೀತಿಯಲ್ಲಿ ಇವರು ಸುದ್ದಿಯಲ್ಲಿರಬೇಕು ಎಂದು ಬಯಸುತ್ತಾರೆ ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವಿರುದ್ಧ ಹರಿಹಾಯ್ದ ಅವರು, ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಪ್ರಚಾರವೇ ಅವರಿಗೆ ಮುಖ್ಯ’ ಎಂದು ಟೀಕಿಸಿದರು.</p>.<p>‘ಬಂದ್ಗೆ ಕರೆ ನೀಡಿರುವವರು ನಕಲಿ ಹೋರಾಟಗಾರರಾಗಿದ್ದಾರೆ. ಕನ್ನಡದ ಮೇಲೆ ಇವರಿಗೆ ಪ್ರೀತಿ ಇಲ್ಲ. ಹೊರಗಿನಿಂದ ಬಂದ ವ್ಯಾಪಾರಸ್ಥರು ಸೇರಿದಂತೆ ಹಲವರು ಬಳಿ ಕನ್ನಡದ ಹೆಸರಲ್ಲಿ ರೋಲ್ ಕಾಲ್ ಮಾಡುತ್ತಾರೆ’ ಎಂದು ಆರೋಪಿಸಿದರು.</p>.<p>‘ಮರಾಠಾ ಅಭಿವೃದ್ಧಿ ನಿಗಮ ರಚನೆಯನ್ನು ಸ್ವಾಗತಿಸುತ್ತೇನೆ. ಬೀದರ್ನಿಂದ ಬೆಂಗಳೂರು ವರೆಗೆ ಮರಾಠಾ ಸಮಾಜದವರು ನೆಲೆಸಿದ್ದಾರೆ. ಅವರೂ ಕನ್ನಡಿಗರೇ’ ಎಂದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/narayana-gowdas-two-challenges-to-bjp-mla-basanagouda-patil-yatnal-development-corporation-for-780669.html" target="_blank"><strong> </strong>ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಕರವೇ ನಾರಾಯಣಗೌಡರ ಎರಡು ಸವಾಲು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>