<p><strong>ಹುಬ್ಬಳ್ಳಿ:</strong> ಇಲ್ಲಿನ ಜೆಸಿ ನಗರದ ನೌಕರರ ಭವನದ ಹಿಂಭಾಗದ ಮೂರುಸಾವಿರ ಮಠದ ಎಂಟು ಗುಂಟೆ ಜಾಗದಲ್ಲಿ ಭೂ ಬಾಡಿಗೆ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡಿದ್ದ ಹತ್ತು ಕುಟುಂಬಗಳನ್ನು ಶ್ರೀಮಠದ ಆಡಳಿತ ಮಂಡಳಿ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಿತು.</p>.<p>ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ನೇತೃತ್ವದಲ್ಲಿ ಮಠದ ಸಿಬ್ಬಂದಿ ಮನೆಯೊಳಗಿದ್ದ ಸಾಮಾನುಗಳನ್ನು ತೆರವುಗೊಳಿಸಿದರು. ಬಾಗಿಲು ಹಾಕಲಾಗಿದ್ದ ಕೆಲವು ಮನೆಗಳ ಬೀಗ ಒಡೆದು, ತಮ್ಮ ಸುಪರ್ದಿಗೆ ಪಡೆದುಕೊಂಡರು.</p>.<p>ಈ ವೇಳೆ ನಿವಾಸಿಗಳು ಮಠದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು.</p>.<p>‘ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಇಲ್ಲಿಯೇ ಇರಲು ಅವಕಾಶ ಕೊಟ್ಟರೆ ಜೀವನ ಸಾಗಿಸುತ್ತೇವೆ ಎಂದು ಕಣ್ಣೀರಿಟ್ಟರು.</p>.<p>‘ಹಿಂದಿನ ಜಗದ್ಗುರು ಗಂಗಾಧರೇಶ್ವರ ಸ್ವಾಮೀಜಿ ನಮಗೆ ವಾಸಿಸಲು ಜಾಗ ನೀಡಿದ್ದರು. ಮಠಕ್ಕೆ ಬಾಡಿಗೆ ತುಂಬುತ್ತ ಇಲ್ಲಿಯೇ ಜೀವನ ಸಾಗಿಸಿ ಎಂದಿದ್ದರು. ಈಗ ತೆರವುಗೊಳಿಸಲಾಗುತ್ತಿದೆ’ ಎಂದು ಲಕ್ಷ್ಮಿ ನಾಯಕವಾಲೆ ಹೇಳಿದರು.</p>.<p>'ಎಂಬತ್ತು ವರ್ಷಗಳಿಂದ ಮಠಕ್ಕೆ ಭೂ ಬಾಡಿಗೆ ಹಾಗೂ ಪಾಲಿಕೆಗೆ ಕರ ಪಾವತಿಸುತ್ತ ಬಂದಿದ್ದೇವೆ. ಏಕಾಏಕಿ ಮನೆ ಖಾಲಿ ಮಾಡಿದರೆ ತೊಂದರೆಯಾಗುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಶಕುಂತಲಾ ಬಡಿಗೇರ ಆಗ್ರಹಿಸಿದರು.</p>.<p>‘2019ರ ಜೂನ್ ಒಳಗಾಗಿ ಮೂರುಸಾವಿರ ಮಠಕ್ಕೆ ಜಾಗ ಬಿಟ್ಟುಕೊಡಬೇಕು ಎಂದು 2018ರ ಮೇ ತಿಂಗಳಲ್ಲಿ ನಡೆದ ಲೋಕ ಅದಾಲತ್ನಲ್ಲಿ ಆದೇಶ ನೀಡಲಾಗಿತ್ತು. ಮಾನವೀಯತೆ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲಾವಕಾಶ ನೀಡಿದ್ದೆವು. ಆದರೂ, ಮನೆ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಮೂರುಸಾವಿರ ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇಲ್ಲಿನ ಜೆಸಿ ನಗರದ ನೌಕರರ ಭವನದ ಹಿಂಭಾಗದ ಮೂರುಸಾವಿರ ಮಠದ ಎಂಟು ಗುಂಟೆ ಜಾಗದಲ್ಲಿ ಭೂ ಬಾಡಿಗೆ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡಿದ್ದ ಹತ್ತು ಕುಟುಂಬಗಳನ್ನು ಶ್ರೀಮಠದ ಆಡಳಿತ ಮಂಡಳಿ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಿತು.</p>.<p>ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ನೇತೃತ್ವದಲ್ಲಿ ಮಠದ ಸಿಬ್ಬಂದಿ ಮನೆಯೊಳಗಿದ್ದ ಸಾಮಾನುಗಳನ್ನು ತೆರವುಗೊಳಿಸಿದರು. ಬಾಗಿಲು ಹಾಕಲಾಗಿದ್ದ ಕೆಲವು ಮನೆಗಳ ಬೀಗ ಒಡೆದು, ತಮ್ಮ ಸುಪರ್ದಿಗೆ ಪಡೆದುಕೊಂಡರು.</p>.<p>ಈ ವೇಳೆ ನಿವಾಸಿಗಳು ಮಠದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು.</p>.<p>‘ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಇಲ್ಲಿಯೇ ಇರಲು ಅವಕಾಶ ಕೊಟ್ಟರೆ ಜೀವನ ಸಾಗಿಸುತ್ತೇವೆ ಎಂದು ಕಣ್ಣೀರಿಟ್ಟರು.</p>.<p>‘ಹಿಂದಿನ ಜಗದ್ಗುರು ಗಂಗಾಧರೇಶ್ವರ ಸ್ವಾಮೀಜಿ ನಮಗೆ ವಾಸಿಸಲು ಜಾಗ ನೀಡಿದ್ದರು. ಮಠಕ್ಕೆ ಬಾಡಿಗೆ ತುಂಬುತ್ತ ಇಲ್ಲಿಯೇ ಜೀವನ ಸಾಗಿಸಿ ಎಂದಿದ್ದರು. ಈಗ ತೆರವುಗೊಳಿಸಲಾಗುತ್ತಿದೆ’ ಎಂದು ಲಕ್ಷ್ಮಿ ನಾಯಕವಾಲೆ ಹೇಳಿದರು.</p>.<p>'ಎಂಬತ್ತು ವರ್ಷಗಳಿಂದ ಮಠಕ್ಕೆ ಭೂ ಬಾಡಿಗೆ ಹಾಗೂ ಪಾಲಿಕೆಗೆ ಕರ ಪಾವತಿಸುತ್ತ ಬಂದಿದ್ದೇವೆ. ಏಕಾಏಕಿ ಮನೆ ಖಾಲಿ ಮಾಡಿದರೆ ತೊಂದರೆಯಾಗುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಶಕುಂತಲಾ ಬಡಿಗೇರ ಆಗ್ರಹಿಸಿದರು.</p>.<p>‘2019ರ ಜೂನ್ ಒಳಗಾಗಿ ಮೂರುಸಾವಿರ ಮಠಕ್ಕೆ ಜಾಗ ಬಿಟ್ಟುಕೊಡಬೇಕು ಎಂದು 2018ರ ಮೇ ತಿಂಗಳಲ್ಲಿ ನಡೆದ ಲೋಕ ಅದಾಲತ್ನಲ್ಲಿ ಆದೇಶ ನೀಡಲಾಗಿತ್ತು. ಮಾನವೀಯತೆ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲಾವಕಾಶ ನೀಡಿದ್ದೆವು. ಆದರೂ, ಮನೆ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಮೂರುಸಾವಿರ ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>