‘ನಾಗಲಿಂಗ ಶ್ರೀ’ ಪ್ರಶಸ್ತಿಗೆ ಡಾ.ಸಿ.ಆರ್.ಚಂದ್ರಶೇಖರ ಆಯ್ಕೆ
ಅಬ್ದುಲರಝಾಕ ನದಾಫ್
Published : 9 ಜುಲೈ 2024, 6:56 IST
Last Updated : 9 ಜುಲೈ 2024, 6:56 IST
ಫಾಲೋ ಮಾಡಿ
Comments
ನವಲಗುಂದದಲ್ಲಿರುವ ಅಜಾತ ನಾಗಲಿಂಗ ಅಜ್ಜನ ಗದ್ದುಗೆ
ಶ್ರೀ ಮಠದಲ್ಲಿ ಭಕ್ತರ ಸೇವೆ ಅಗಾಧ. ಯಾವುದೇ ಜಾತಿ ಮತ ಭೇದವಿಲ್ಲದೆ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಸಕಲ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ
ಎನ್.ಎಚ್.ಕೋನರಡ್ಡಿ ಶಾಸಕರು
ಆರಾಧನ ಮಹೋತ್ಸವದಂದು 6 ಕ್ವಿಂಟಲ್ಗಿಂತ ಹೆಚ್ಚು ಗೋಧಿ ರವೆ ಬಳಸಿ ಮಾದಲಿಯಿಂದ ನಾಗಲಿಂಗಸ್ವಾಮಿಗಳ ಭವ್ಯ ಅಲಂಕೃತ ಮೂರ್ತಿ ತಯಾರಿಸಿ ಪ್ರಸಾದರೂಪದಲ್ಲಿ ಭಕ್ತರಿಗೆ ಹಂಚುತ್ತೇವೆ
ನಂದೀಶ ಸಂಗಟಿ ಶ್ರೀಮಠದ ಭಕ್ತ
ಜುಲೈ 1011 ರಂದು ಜಾತ್ರಾ ಮಹೋತ್ಸವ
ನವಲಗುಂದ: ಅಜಾತ ನಾಗಲಿಂಗ ಸ್ವಾಮಿಗಳ 143ನೇ ಆರಾಧನಾ ಮಹೋತ್ಸವ ಜುಲೈ 10 ಮತ್ತು 11 ರಂದು ಜರುಗಲಿದೆ. 11ರಂದು ಆರಾಧನೆ ಮಜಾರ ಪೂಜೆ ಸಂಜೆ ಹುಬ್ಬಳ್ಳಿಯ ದಯಾನಂದ ಗುರುಕುಲದ ಚಿದ್ರೂಪಾನಂದ ಸರಸ್ವತಿ ಶ್ರೀ ಖಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶಾಸಕ ಎನ್.ಎಚ್.ಕೋನರಡ್ಡಿ ಅಧ್ಯಕ್ಷತೆ ವಹಿಸುವರು. ಖ್ಮಾತ ಮನೋವೈದ್ಯ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ ‘ನಾಗಲಿಂಗ ಶ್ರೀ ಪ್ರಶಸ್ತಿ ಪ್ರದಾನ’ ಹಾಗೂ ಧರ್ಮಸಭೆ ನಡೆಯಲಿದೆ. ಜುಲೈ 11 ಗುರುವಾರ ಬೆಳಿಗ್ಗೆ ಶಿರೋಳ ಗವಿಮಠದ ಅಭಿನವ ಯಚ್ಚರೇಶ್ವರ ಸ್ವಾಮೀಜಿ ಸಾನಿಧ್ಯ ಎನ್.ನಾಗೇಂದ್ರ ಸಮ್ಮುಖದಲ್ಲಿ ಸಂಗೀತಸೇವೆ ಸಂಜೆ ಪಲ್ಲಕ್ಕಿ ಹಾಗೂ ಮೇಣೆ ಉತ್ಸವ ಬಹು ವಿಜೃಂಭಣೆಯಿಂದ ಜರುಗುತ್ತವೆ.