ನವೀನ್, ರಂಜಿತ್, ಶಾಹಿನ್, ಕಮಲಾ ಪ್ರಥಮ

ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ, ‘ನಮ್ಮ ನಡೆ ಭವ್ಯ ಭಾರತದ ಕಡೆಗೆ’ ಧ್ಯೇಯ ವಾಕ್ಯದೊಂದಿಗೆ ಭಾನುವಾರ ಆಯೋಜಿಸಿದ್ದ, ‘ಹುಬ್ಬಳ್ಳಿ ಮ್ಯಾರಥಾನ್– 2023’ರ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡವರಿಗೆ ನಗದು ಬಹುಮಾನ ವಿತರಿಸಲಾಯಿತು.
14 ವರ್ಷದೊಳಗಿನ ಬಾಲಕರ ವಿಭಾಗ (6 ಕಿ.ಮೀ.): ವೇದಾಂತ (ಪ್ರಥಮ), ನಿಂಗಬಸಪ್ಪ ಗಾಣಿಗೇರ (ದ್ವಿತೀಯ), ಸುಧಾಂಶು ಕ್ಷೀರಸಾಗರ (ತೃತೀಯ). ಬಾಲಕಿಯರ ವಿಭಾಗ: ಶ್ವೇತಾ ಬಡಿಗೇರ (ಪ್ರಥಮ), ಶ್ರೇಯಾ ಕಾಳೆ (ದ್ವಿತೀಯ), ಎಂ.ಎಸ್. ಸನ್ನಿ (ತೃತೀಯ).
15-49 ವಯೋಮಾನದ ಪುರುಷ ವಿಭಾಗ (14 ಕಿ.ಮೀ): ನವೀನ ಎಸ್., (ಪ್ರಥಮ), ಬಹುಬನ್ ಶಿಂಧೆ (ದ್ವಿತೀಯ), ಸುನೀಲ ಎನ್., (ತೃತೀಯ). ಮಹಿಳಾ ವಿಭಾಗ: ಶಾಹಿನ್ ಕೆ.(ಪ್ರಥಮ), ಪ್ರಿಯಾ ಬಾಗೇವಾಡಿ (ದ್ವಿತೀಯ).
50 ವರ್ಷ ಮೇಲ್ಪಟ್ಟವರ ವಿಭಾಗ (14 ಕಿ.ಮೀ): ರಂಜಿತ್ ಕೆ., (ಪ್ರಥಮ), ಕಲ್ಲಪ್ಪ ಟಿ., (ದ್ವಿತೀಯ), ಎಲ್. ನಾರಾಯಣ (ತೃತೀಯ). ಮಹಿಳಾ ವಿಭಾಗ: ಕಮಲಾ ಹೆಗಡೆ (ಪ್ರಥಮ), ಭವಾನಿ ಭಂಡಾರಿ (ದ್ವಿತೀಯ), ಅನಸೂಯಾ ಕೆ., (ತೃತೀಯ).
ವಿಶೇಷ ವಿಭಾಗ (6 ಕಿ.ಮೀ.): ಪ್ರವೀಣ ಎಸ್.ಬಿ., ಹಾಗೂ ಶಿವಲಿಂಗಮ್ಮ ಕುರುವತ್ತಿಮಠ.
14 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಬಹುಮಾನ ₹5 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ₹2 ಸಾವಿರ, 15– 49 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ₹10 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ, 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ₹10 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ ಹಾಗೂ ವಿಶೇಷ ವಿಭಾಗದಲ್ಲಿ ಸಮಾನ ಸ್ಥಾನ ಪಡೆದ ಇಬ್ಬರಿಗೆ ತಲಾ ₹5 ಸಾವಿರ ವಿತರಿಸಲಾಯಿತು.
ಕಾಲೇಜಿನ ಪ್ರವೇಶದ್ವಾರದಿಂದ ಆರಂಭಗೊಂಡ ಮ್ಯಾರಥಾನ್ಗೆ ಶಾಸಕ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಕಿಮ್ಸ್ ಮಾರ್ಗವಾಗಿ ಹೊರಟ ಮ್ಯಾರಥಾನ್ ಹೊಸೂರು, ಕೇಶ್ವಾಪುರ, ರೈಲು ನಿಲ್ದಾಣ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ಅಕ್ಷಯ ಪಾರ್ಕ್, ತೋಳನಕೆರೆ, ಶಿರೂರು ಪಾರ್ಕ್ ಮೂಲಕ ಕಾಲೇಜು ಪ್ರವೇಶದ್ವಾರ ತಲುಪಿತು. ವಿದ್ಯಾರ್ಥಿಗಳು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.
ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್, ವೀರೇಶ ಸಂಗಳದ, ಬಿ.ಎಲ್. ದೇಸಾಯಿ, ಪಿ.ಜಿ. ತೆವರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.